ನವದೆಹಲಿ: ಸರಳ, ಸಜ್ಜನ ರಾಜಕಾರಣಿ, ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಭಾನುವಾರ ಗೋವಾದಲ್ಲಿ ಕೊನೆಯುಸಿರೆಳೆದಿದ್ದಾರೆ. ಗೋವಾದ ಬಿಜೆಪಿ ಕಛೇರಿಯಲ್ಲಿ ಪಾರ್ಥಿವ ಶರೀರವನ್ನು ಬೆಳಗ್ಗೆ ಇಡಲಾಗುತ್ತದೆ. ಬಳಿಕ ಕಲಾ ಅಕಾಡಮಿಯಲ್ಲಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 1.30ರ ಸುಮಾರಿಗೆ ತೆರಳಿ ಅಂತಿಮ ನಮನ ಸಲ್ಲಿಸಲಿದ್ದಾರೆ.
ಕಳೆದ ಒಂದು ವರ್ಷಗಳಿಂದ ತೀವ್ರ ಸ್ವರೂಪದ ಕ್ಯಾನ್ಸರ್ನಿಂದ ಪರಿಕ್ಕರ್ ಬಳಲುತ್ತಿದ್ದರು. ಇತ್ತೀಚೆಗೆ ಆರೋಗ್ಯ ಕ್ಷೀಣಿಸಿದ್ದು, ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇಂದು ಸಂಜೆಯವರೆಗೆ ಕಲಾ ಅಕಾಡಮಿಯಲ್ಲಿ ಅವರ ಪಾರ್ಥೀವ ಶರೀರವನ್ನು ಇಡಲಾಗುತ್ತದೆ. ಸಂಜೆ ನಾಲ್ಕರಿಂದ ಕಲಾ ಅಕಾಡಮಿಯಿಂದ ಮಿರಾಮರ್ಗೆ ಮೆರವಣಿಗೆ ನಡೆಯಲಿದೆ. ಅಲ್ಲಿಯೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಧ್ಯಾಹ್ನ ಪಣಜಿಗೆ ಆಗಮಿಸಿ ಅಗಲಿದ ನಾಯಕನಿಗೆ ಗೌರವಾರ್ಪಣೆ ಮಾಡಲಿದ್ದಾರೆ. ಪರಿಕ್ಕರ್ ಸಾವಿಗೆ ತೀವ್ರ ನೋವನ್ನು ವ್ಯಕ್ತಪಡಿಸಿರುವ ಮೋದಿಯವರು, ‘ಪರಿಕ್ಕರ್ ಅವರ ನಾಯಕತ್ವಕ್ಕೆ ಪರ್ಯಾಯವಿಲ್ಲ. ಅವರು ನೈಜ ದೇಶಭಕ್ತ ಮತ್ತು ಎಲ್ಲರೂ ಶ್ಲಾಘಿಸುವಂತಹ ಅತ್ಯದ್ಭುತ ಆಡಳಿತಗಾರ. ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಮುಂದಿನ ಪೀಳಿಗೆಯೂ ಸ್ಮರಿಸಲಿದೆ. ಅವರ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ, ಅಭಿಮಾನಿಗಳಿಗೆ ದೇವರು ಕರುಣಿಸಲಿ’ ಎಂದಿದ್ದಾರೆ.
Shri Manohar Parrikar was an unparalleled leader.
A true patriot and exceptional administrator, he was admired by all. His impeccable service to the nation will be remembered by generations.
Deeply saddened by his demise. Condolences to his family and supporters.
Om Shanti. pic.twitter.com/uahXme3ifp
— Chowkidar Narendra Modi (@narendramodi) March 17, 2019
’ಪರಿಕ್ಕರ್ ಅವರು ಆಧುನಿಕ ಗೋವಾದ ನಿರ್ಮಾತೃ. ಅವರ ಅದಮ್ಯ ವ್ಯಕ್ತಿತ್ವ ಮತ್ತು ಗುಣಕ್ಕೆ ಧನ್ಯವಾದ, ಹಲವು ವರ್ಷಗಳಿಂದ ಅವರು ರಾಜ್ಯದ ಮೆಚ್ಚಿನ ನಾಯಕನಾಗಿದ್ದರು, ಅವರು ನೀತಿ ನಿಯಮಗಳು ಗೋವಾವನ್ನು ಉನ್ನತ ಮಟ್ಟಕ್ಕೆ ಏರಿಸಿದವು. ರಕ್ಷಣಾ ಸಚಿವರಾಗಿದ್ದ ಸಂದರ್ಭದಲ್ಲೂ ಅವರು ನಿರ್ಧಾರಗಳು ಭಾರತದ ಭದ್ರತಾ ಸಾಮರ್ಥ್ಯವನ್ನು ಹೆಚ್ಚಿಸಿವೆ, ದೇಶೀಯ ರಕ್ಷಣಾ ಉತ್ಪಾದನೆಗೆ ಉತ್ತೇಜನವನ್ನು ನೀಡಿವೆ, ಮಾಜಿ ಸೈನಿಕರ ಬದುಕನ್ನು ಅವರು ಉತ್ತಮಪಡಿಸಿದ್ದಾರೆ’ ಎಂದಿದ್ದಾರೆ.
Shri Manohar Parrikar was the builder of modern Goa. Thanks to his affable personality and accessible nature, he remained the preferred leader of the state for years. His pro-people policies ensured Goa scales remarkable heights of progress.
— Chowkidar Narendra Modi (@narendramodi) March 17, 2019
ಪ್ರಧಾನಿಯವರು ಮಾತ್ರವಲ್ಲದೇ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್, ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳ ಸಿಎಂಗಳು ಇಂದು ಪಣಜಿಗೆ ಆಗಮಿಸಿ ಮನೋಹರ್ ಪರಿಕ್ಕರ್ ಅವರಿಗೆ ಅಂತಿಮ ನಮನವನ್ನು ಸಲ್ಲಿಕೆ ಮಾಡಲಿದ್ದಾರೆ.
ಗೋವಾದಲ್ಲಿ 7 ದಿನಗಳ ಶೋಕಾಚರಣೆಯನ್ನು ನಡೆಸಲಾಗುತ್ತಿದ್ದು, ರಾಷ್ಟ್ರಧ್ವಜ ಅರ್ಧಕ್ಕೆ ಇಳಿಯಲಿದೆ. ಸಿಎಂ ಆಗಿರುವಾಗಲೇ ಪರಿಕ್ಕರ್ ಇಹಲೋಕ ತ್ಯಜಿಸಿದ್ದಾರೆ. ಮಾ.18 ರಂದು ಕೇಂದ್ರ ಸರ್ಕಾರವು ರಾಷ್ಟ್ರೀಯ ಶೋಕಾಚರಣೆಗೆ ಕರೆ ನೀಡಿದೆ, ಇಂದು ಕೇಂದ್ರ ಸಂಪುಟ ಸಮಿತಿ ಸಭೆಯನ್ನು ನಡೆಸಿ ಪರಿಕ್ಕರ್ ಅವರಿಗೆ ಸಂತಾಪ ಸೂಚಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.