ನವದೆಹಲಿ : ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಮೈ ಭಿ ಚೌಕಿದಾರ್’ (Mai Bhi Chowkidar) ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ ಮತ್ತು ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಚಾಲನೆಯನ್ನೂ ನೀಡಿದ್ದಾರೆ. ತನ್ನನ್ನು ದೇಶದ ಚೌಕಿದಾರ ಎಂದು ಹೇಳುವ ಮೋದಿಯವರು, ನಾನು ದೇಶದ ಸೇವೆ ಮಾಡಲು ಬಲಿಷ್ಠವಾಗಿ ನಿಂತುಕೊಂಡಿದ್ದೇನೆ ಎಂದು ಟ್ವಿಟ್ಟರ್ನಲ್ಲಿ ವಿಡಿಯೋ ಮೂಲಕ ತಿಳಿಸಿದ್ದಾರೆ.
‘ನಿಮ್ಮ ಚೌಕಿದಾರ ದೇಶ ಸೇವೆ ಮಾಡಲು ಬಲಿಷ್ಠವಾಗಿ ನಿಂತುಕೊಂಡಿದ್ದೇನೆ. ಆದರೆ ನಾನು ಒಬ್ಬಂಟಿಗನಲ್ಲ, ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಹೋರಾಡುತ್ತಿರುವ, ಸಮಾಜದ ಇತರ ದುಷ್ಟತೆಗಳನ್ನು ನಿರ್ಮೂಲನೆ ಮಾಡಲು ಹೋರಾಡುತ್ತಿರುವ, ಬಡತನವನ್ನು ನಿರ್ಮೂಲನೆ ಮಾಡಿ ದೇಶದ ಪ್ರಗತಿಗಾಗಿ ಕಷ್ಟಪಟ್ಟು ಶ್ರಮಿಸುತ್ತಿರುವ ಪ್ರತಿಯೊಬ್ಬರೂ ಚೌಕಿದಾರರೇ ಆಗಿದ್ದಾರೆ. ಇಂದು ಪ್ರತಿ ಭಾರತೀಯನೂ ನಾನೂ ಕೂಡಾ ಚೌಕಿದಾರ ಎನ್ನುತ್ತಿದ್ದಾನೆ’ ಎಂದು ಮೋದಿ #MainBhiChowkidar ಹ್ಯಾಶ್ ಟ್ಯಾಗ್ನೊಂದಿಗೆ ಟ್ವೀಟ್ ಮಾಡಿದ್ದಾರೆ.
Your Chowkidar is standing firm & serving the nation.
But, I am not alone.
Everyone who is fighting corruption, dirt, social evils is a Chowkidar.
Everyone working hard for the progress of India is a Chowkidar.
Today, every Indian is saying-#MainBhiChowkidar
— Narendra Modi (@narendramodi) March 16, 2019
ಹಿಂದಿನ ಚುನಾವಣೆಯ ಮಾದರಿಯನ್ನೇ ಇಟ್ಟುಕೊಂಡು ಈ ಬಾರಿಯೂ ಬಿಜೆಪಿ ಪ್ರಚಾರ ಅಭಿಯಾನವನ್ನು ಆರಂಭಿಸಿದೆ. ಕಳೆದ ಬಾರಿ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರು ಪ್ರಧಾನಿಯನ್ನು ಚಾಯ್ ವಾಲಾ ಎಂದು ವ್ಯಂಗ್ಯವಾಡಿದ್ದರು, ಅದನ್ನೇ ಮುಂದಿಟ್ಟುಕೊಂಡು ಬಿಜೆಪಿ ಜನರ ಬಳಿ ಮತ ಯಾಚನೆಯನ್ನು ಮಾಡಿತ್ತು ಮತ್ತು ಅದರಲ್ಲಿ ಯಶಸ್ವಿಯೂ ಆಗಿತ್ತು. ಇದೀಗ ಅದೇ ರೀತಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಹೇಳಿದ ಚೌಕಿದಾರ್ ಚೋರ್ ಹೈ ಎಂಬ ವ್ಯಂಗ್ಯವನ್ನೇ ಮುಂದಿಟ್ಟುಕೊಂಡು ಮೋದಿಯವರು ಜನತೆಯ ಮುಂದೆ ಹೋಗಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಮೈ ಭಿ ಚೌಕಿದಾರ್ ಎಂಬ ಪ್ರಚಾರವನ್ನೂ ಆರಂಭಿಸಿದ್ದಾರೆ. ಇದರಲ್ಲೂ ಕೂಡ ಅವರು ಯಶಸ್ವಿಯಾಗಿ ಹೊರಹೊಮ್ಮುವ ಸಾಧ್ಯತೆ ಬಹಳ ಹೆಚ್ಚಾಗಿದೆ.
ಕಾಂಗ್ರೆಸ್ ಮುಖಂಡರ ಚೌಕಿದಾರ್ ಚೋರ್ ಹೈ ಎಂಬ ಆರೋಪವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ಸನ್ನು ಎದುರಿಸಿದರೆ ಹೆಚ್ಚಿನ ಮಟ್ಟದಲ್ಲಿ ಜನರನ್ನು ಸೆಳೆಯಲು ಸಾಧ್ಯವಾಗುತ್ತದೆ ಎಂಬುದನ್ನು ಬಿಜೆಪಿಯ ನಿಪುಣರು ಅರಿತುಕೊಂಡು ಮೈ ಭಿ ಚೌಕಿದಾರ್ ಅಭಿಯಾನವನ್ನು ಆರಂಭಿಸಲು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಸಮೀಕ್ಷೆಯನ್ನು ಅವರು ನಡೆಸಿದ್ದಾರೆ. ಸಮೀಕ್ಷೆಯ ಪ್ರಕಾರ ಚೌಕಿದಾರ್ ಚೋರ್ ಹೈ ಎಂಬ ರಾಹುಲ್ ಗಾಂಧಿಯವರ ಆರೋಪದಿಂದ ದೇಶದ ಬಹಳಷ್ಟು ಜನರು ಆಕ್ರೋಶಿತರಾಗಿದ್ದಾರೆ ಎಂಬುದು ತಿಳಿದುಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.