ನವದೆಹಲಿ: ಇಡೀ ಜಗತ್ತು ಪುಲ್ವಾಮ ದಾಳಿ ಬಳಿಕ ನಡೆದ ಸನ್ನಿವೇಶ, ವೈಮಾನಿಕ ದಾಳಿಗಳ ಬಗ್ಗೆಯೇ ಚಿತ್ತ ಹರಿಸಿದ್ದ ಸಂದರ್ಭದಲ್ಲಿ, ಭಾರತೀಯ ಸೇನೆಯು ಸದ್ದಿಲ್ಲದೆ ಮಯನ್ಮಾರ್ ಸೇನೆಯ ಜೊತೆಗೂಡಿ ಭಾರತ-ಮಯನ್ಮಾರ್ ಗಡಿಯಲ್ಲಿನ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆಯನ್ನು ನಡೆಸಿ ಅವರನ್ನು ಸದೆ ಬಡಿದಿದೆ. ಈ ಬಗ್ಗೆ ಇಂಡಿಯಾ ಟುಡೇ ವರದಿ ಪ್ರಕಟಿಸಿದೆ.
ಫೆಬ್ರವರಿ 17 ಮತ್ತು ಮಾರ್ಚ್ 2 ರ ನಡುವೆ ಈ ಕಾರ್ಯಾಚರಣೆ ನಡೆದಿದ್ದು, ಮಯನ್ಮಾರ್ನ ಸಿಟ್ವೆ ಬಂದರನ್ನು ಕೋಲ್ಕತ್ತಾ ಬಂದರಿನೊಂದಿಗೆ ಸಂಪರ್ಕಿಸುವ ಕಲದನ್ ಮಲ್ಟಿ ಮೋಡಲ್ ಟ್ರಾನ್ಸಿಟ್ ಟ್ರಾನ್ಸ್ಪೋರ್ಟ್ ಯೋಜನೆಗೆ ದೊಡ್ಡ ಮಟ್ಟದಲ್ಲಿ ಬೆದರಿಕೆಯನ್ನು ಒಡ್ಡುತ್ತಿದ್ದ ಉಗ್ರರನ್ನು ಸದೆ ಬಡಿಯಲಾಗಿದೆ. ಕಲದನ್ ಯೋಜನೆ ಮಿಜೋರಾಂ ಮತ್ತು ಕೋಲ್ಕತ್ತಾ ನಡುವಣ ಪ್ರಯಾಣವನ್ನು ಸಾವಿರ ಕಿಮೀನಷ್ಟು ತಗ್ಗಿಸಲಿದೆ.
ಮಯನ್ಮಾರಿನ ಅತೀದೊಡ್ಡ ಬಂಡುಕೋರ ಸಂಘಟನೆಗಳಲ್ಲಿ ಒಂದಾದ “ಅರಕನ್ ಆರ್ಮಿ” ಈ ಯೋಜನೆಗೆ ಬೆದರಿಕೆಯೊಡ್ಡಿತ್ತು. ಅಲ್ಲದೇ, ಉಭಯ ದೇಶಗಳ ಸೇನೆಯ ಜಂಟಿ ಕಾರ್ಯಾಚರಣೆ ನಾಗಾ ಪ್ರತ್ಯೇಕತಾವಾದಿ ಸಂಘಟನೆಯಾದ ನ್ಯಾಷನಲ್ ಸೋಶಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್-ಖಪ್ಲಾಂಗ್ ಅನ್ನು ಕೂಡ ಗುರಿಯಾಗಿರಿಸಿಕೊಂಡಿತ್ತು.
“ಭಾರತವನ್ನು ಟಾರ್ಗೆಟ್ ಮಾಡುತ್ತಿರುವ ಮೀಜೋರಾಂಗೆ ತಾಗಿಕೊಂಡಿರುವ ಬಂಡುಕೋರರ ಶಿಬಿರಗಳ ಮೇಲೆ ಆಕ್ರಮಣ ನಡೆಸಲು ಮಯನ್ಮಾರ್ ಸೇನೆಯೊಂದಿಗೆ ಡೀಲ್ ಮಾಡಿಕೊಳ್ಳಲಾಯಿತು. ಇದರಿಂದಾಗಿ ನಾಗಾ ಬಂಡುಕೋರರ ಟಾಗಾದಲ್ಲಿನ ಕೇಂದ್ರ ಕಛೇರಿ ನೆಲಸಮವಾಯಿತು. ನಾವು ನೀಡಿದ ನಿರ್ದಿಷ್ಟ ಮಾಹಿತಿಯನ್ನು ಆಧರಿಸಿ ಮಯನ್ಮಾರ್ ಸೇನೆ ಈ ಶಿಬಿರಗಳ ಮೇಲೆ ದಾಳಿಯನ್ನು ನಡೆಸಿತು, ಈಗ ಅವುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ” ಎಂದು ಭಧ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸೇನೆಯ ವಿಶೇಷ ಪಡೆ, ಅಸ್ಸಾಂ ರೈಫಲ್ಸ್, ಇನ್ಫಾಂಟ್ರಿ ಯುನಿಟ್ಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಡ್ರೋಣ್ಗಳು, ಹೆಲಿಕಾಫ್ಟರ್ಗಳು, ಇನ್ನಿತರ ಕಣ್ಗಾವಲು ಅಸ್ತ್ರಗಳು ಇವುಗಳಿಗೆ ಕಾರ್ಯಾಚರಣೆಯಲ್ಲಿ ಸಹಾಯ ಹಸ್ತ ಚಾಚಿದ್ದವು.
ಇದು ಭಾರತೀಯ ಸೇನೆಯ ಮೂರನೇ ಸರ್ಜಿಕಲ್ ಸ್ಟ್ರೈಕ್ ಎಂದೇ ಹೇಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.