ನವದೆಹಲಿ: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ, ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಅವರು ನೀಡಿರುವ ಹೇಳಿಕೆ ಕಾಂಗ್ರೆಸ್ಗೆ ತೀವ್ರ ಮುಜುಗರವನ್ನುಂಟು ಮಾಡಿದೆ. ಭಯೋತ್ಪಾದನೆಗೆ ದಿಟ್ಟ ಉತ್ತರವನ್ನು ನೀಡುವಲ್ಲಿ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ಅವರು, ಈಗಿನ ಪ್ರಧಾನಿ ನರೇಂದ್ರ ಮೋದಿಯವರಷ್ಟು ಬಲಿಷ್ಠರಾಗಿರಲಿಲ್ಲ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶೀಲಾ ಹೇಳಿದ್ದಾರೆ.
ಸಿಎನ್ಎನ್-ನ್ಯೂಸ್ 18ಗೆ ಸಂದರ್ಶನವನ್ನು ನೀಡಿದ ಶೀಲಾ ದೀಕ್ಷಿತ್ ಅವರು, ’26/11 ಮುಂಬಯಿ ದಾಳಿಗೆ ಮನ್ಮೋಹನ್ ಸಿಂಗ್ ಅವರು ನೀಡಿದ ಪ್ರತಿಕ್ರಿಯೆ, ಪುಲ್ವಾಮ ದಾಳಿಯ ಬಗ್ಗೆ ಮೋದಿಯವರು ನೀಡಿದ ಪ್ರತಿಕ್ರಿಯೆಯಷ್ಟು ಕಟು ಮತ್ತು ದೃಢವಾಗಿರಲಿಲ್ಲ’ ಎಂದು ಅಭಿಪ್ರಾಯಿಸಿದ್ದಾರೆ.
ತಮ್ಮ ಹೇಳಿಕೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ವಿಚಲಿತರಾದ ಶೀಲಾ ದೀಕ್ಷಿತ್ ಅವರು, ಟ್ವಿಟ್ ಮಾಡುವ ಮೂಲಕ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ.
I have seen some media is twisting my comments made in an interview. Here is what I said – it may seem to some people that Mr Modi is stronger on terror but I think this is a poll gimmick more than anything else..
— Sheila Dikshit (@SheilaDikshit) March 14, 2019
ಈ ಹೇಳಿಕೆಯನ್ನು ನೀಡಿರುವ ಶೀಲಾ ದೀಕ್ಷಿತ್ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಅಭಿನಂದನೆಗಳನ್ನು ತಿಳಿಸಿದ್ದು, ದೇಶಕ್ಕೆ ಈಗಾಗಲೇ ಗೊತ್ತಿರುವ ಸತ್ಯವನ್ನು ಪುನರುಚ್ಚರಿಸಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.
Thank you @SheilaDikshit ji for reiterating what the nation already knows but the Congress party is never ready to admit.https://t.co/k7xqIgOa4r
— Amit Shah (@AmitShah) March 14, 2019
ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ, ಆರೋಪ ಮತ್ತು ಪ್ರತ್ಯಾರೋಪಗಳು ತಾರಕಕ್ಕೇರಿರುವ ಈ ಹೊತ್ತಿನಲ್ಲಿ ಶೀಲಾ ದೀಕ್ಷಿತ್ ಅವರು ಈ ರೀತಿಯ ಹೇಳಿಕೆಯನ್ನು ನೀಡಿದ್ದು, ಕಾಂಗ್ರೆಸ್ಗೆ ತೀವ್ರವಾದ ಮುಜುಗರವನ್ನುಂಟು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.