ನವದೆಹಲಿ: ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಬಿಜೆಪಿ, ‘ಮೋದಿ ಹೇ ತೊ ಮುಮ್ಕಿನ್ ಹೇ’(ಮೋದಿ ಇದ್ದರೆ ಸಾಧ್ಯ) ಎಂಬ ವಾಕ್ಯವನ್ನು ತನ್ನ ಘೋಷವಾಕ್ಯವಾಗಿ ಆಯ್ಕೆ ಮಾಡಿದೆ. ಕ್ರಿಯಾಶೀಲ ಕೆಲಸಗಳನ್ನು ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ವ್ಯಕ್ತಿತ್ವಕ್ಕೆ ಪೂರಕವಾದ ಘೋಷವಾಕ್ಯ ಇದಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
‘ಕಳೆದ ಐದು ವರ್ಷಗಳಿಂದ ಮೋದಿಯವರು ದಿನದ ಸಾಕಷ್ಟು ಗಂಟೆಗಳ ಕಾಲ ಅವಿಶ್ರಾಂತವಾಗಿ ಕೆಲಸಗಳನ್ನು ಮಾಡುತ್ತಿದ್ದಾರೆ, ಇದರಿಂದಾಗಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗಿದೆ. ವಿದೇಶಿ ನೀತಿ, ಆರ್ಥಿಕತೆ ಮತ್ತು ಕಾರ್ಯತಂತ್ರಗಳನ್ನು ಸುಲಭವಾಗಿ ಸ್ವೀಕರಿಸುವ ಮೂಲಕ ಮೋದಿ ತಾನೊಬ್ಬ ತ್ವರಿತ ಕಲಿಕೆಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ’ ಎಂದು ಜೇಟ್ಲಿಯವರು ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಬಣ್ಣಿಸಿದ್ದಾರೆ.
ಮೋದಿಯವರ ಸ್ಪಷ್ಟತೆ ಮತ್ತು ಸ್ಪಷ್ಟ ಗುರಿ, ಸಂಕೀರ್ಣ ವಿಷಯಗಳ ಬಗ್ಗೆಯೂ ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಿದೆ. ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಅವುಗಳನ್ನು ಅನುಷ್ಠಾನಕ್ಕೆ ತರುವ ಭಾರತದ ಕಾರ್ಯವನ್ನು ಜಗತ್ತು ಬೆರಗು ಕಣ್ಣಿನಿಂದ ನೋಡುತ್ತಿದೆ. ಇದೇ ಕಾರಣಕ್ಕೆ ‘ಮೋದಿ ಹೇ ತೊ ಮುಮ್ಕಿನ್ ಹೇ’(ಮೋದಿ ಇದ್ದರೆ ಸಾಧ್ಯವಿದೆ), ಎಂಬ ಪರಿಣಾಮಕಾರಿ ಘೋಷಣೆಯನ್ನು ಬಿಜೆಪಿ ಆಯ್ಕೆ ಮಾಡಿಕೊಂಡಿದೆ ಎಂದಿದ್ದಾರೆ.
ಮೋದಿಯವರ ನಾಯಕತ್ವದಡಿ ಭಾರತ, 2016ರಲ್ಲಿ ಸರ್ಜಿಕಲ್ ಸ್ಟ್ರೈಕ್, 2019ರಲ್ಲಿ ಏರ್ ಸ್ಪ್ರೈಕ್ಗಳನ್ನು ಮಾಡಿ ಭಯೋತ್ಪಾದಕರ ವಿರುದ್ಧ ಕಠಿಣಾತಿ ಕಠಿಣ ಕ್ರಮಗಳನ್ನು ಜರುಗಿಸುವ ಧೈರ್ಯವನ್ನು ತೋರಿಸಿದೆ. ಮೋದಿ ನೇತೃತ್ವದ ಕಳೆದ ಐದು ವರ್ಷಗಳಲ್ಲಿ ಭಾರತ ವಿಶ್ವದ ಅತೀ ವೇಗದ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಸ್ವಚ್ಛ ಭಾರತ, ರೈತರಿಗೆ ಆರ್ಥಿಕ ನೆರವು, ಎಲ್ಲರಿಗೂ ವಸತಿ ಮುಂತಾದ ಎನ್ಡಿಎ ಸರ್ಕಾರದ ಮಹತ್ವದ ಯೋಜನೆಗಳ ಬಗ್ಗೆ ಉಲ್ಲೇಖ ಮಾಡಿರುವ ಜೇಟ್ಲಿ, ಯಾವುದಾದರೂ ಸರ್ಕಾರ ಇದಕ್ಕಿಂತ ಹೆಚ್ಚಿನದ್ದನ್ನು ಮಾಡಿದೆಯೇ ಎಂದು ಪ್ರಶ್ನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.