ನವದೆಹಲಿ: ಭಾರತ ನಡೆಸಿದ ವೈಮಾನಿಕ ದಾಳಿಗೆ ಪ್ರತ್ಯುತ್ತರವಾಗಿ ಪಾಕಿಸ್ಥಾನ ಯುದ್ಧ ವಿಮಾನಗಳು ಭಾರತೀಯ ವಾಯುನೆಲೆಯನ್ನು ಅತಿಕ್ರಮಣ ಮಾಡುವ ಪ್ರಯತ್ನ ಮಾಡಿ ಸೋಲುಂಡಿರುವ ಹಿನ್ನಲೆಯಲ್ಲಿ ಇಂದು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಭದ್ರತಾ ಪಡೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಯಾವುದೇ ಕಾರ್ಯ ನಡೆಯದಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.
ಭಾರತ ಮತ್ತು ಪಾಕ್ ನಡುವಣ ಸಂಬಂಧ ತೀವ್ರವಾಗಿ ಹಳಸಿರುವ ಸಂದರ್ಭದಲ್ಲಿ ಮಾತನಾಡಿರುವ ಅವರು, ಭಾರತ ಯಾವುದೇ ಕಾರಣಕ್ಕೂ ಹಿಮ್ಮೆಟ್ಟುವುದಿಲ್ಲ ಎಂದಿದ್ದಾರೆ.
‘ಮೇರಾ ಬೂತ್ ಸಬ್ಸೇ ಮಜಬೂತ್’ ಎಂಬ ವಿಶ್ವದ ಅತೀದೊಡ್ಡ ವೀಡಿಯೋ ಕಾನ್ಫರೆನ್ಸ್ನ್ನು ಉದ್ದೇಶಿಸಿ ಅವರು ಮಾತನಾಡಿದರು. 15 ಸಾವಿರ ಸ್ಥಳಗಳ ಬಿಜೆಪಿ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿದ್ದರು.
‘ಇಂದು ದೇಶದ ಭಾವನೆ ವಿಭಿನ್ನವಾಗಿದೆ. ಗಡಿಯಾದ್ಯಂತ ನಮ್ಮ ಸೈನಿಕರು ತಮ್ಮ ಶಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ. ಇಡೀ ದೇಶವೇ ಇಂದು ಒಂದಾಗಿ ನಿಂತಿದೆ. ನಮ್ಮ ಒಗ್ಗಟ್ಟಿನ ಶಕ್ತಿಯನ್ನು ಇಡೀ ವಿಶ್ವ ಗಮನಿಸುತ್ತಿದೆ’ ಎಂದರು.
‘ಎಲ್ಲಾ ವಲಯದಲ್ಲೂ ನಾವು ಶ್ರಮಿಸಬೇಕಾಗಿದೆ. ದೇಶವನ್ನು ಕಾಯುತ್ತಿರುವವರಿಗೆ ಭಾರತ ಚಿರಋಣಿಯಾಗಿದೆ, ಅವರಿಂದಾಗಿ ದೇಶ ಅಭಿವೃದ್ಧಿಯ ಉನ್ನತ ಮಟ್ಟವನ್ನು ಏರಿದೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.