ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ನವದೆಹಲಿಯಲ್ಲಿ ’ರಾಷ್ಟ್ರೀಯ ಯುವ ಸಂಸತ್ತು ಉತ್ಸವ 2019 ಪ್ರಶಸ್ತಿ’ಗಳನ್ನು ಪ್ರದಾನ ಮಾಡಿದರು.
ನಾಗಪುರ ಶ್ವೇತಾ ಉಮ್ರೆ ಅವರು ಮೊದಲ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಬೆಂಗಳೂರಿನ ಅಂಜನಾಕ್ಷಿ ದ್ವಿತೀಯ ಮತ್ತು ಪಾಟ್ನಾದ ಮಮತಾ ಕುಮಾರ್ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ‘ಯುವಕರು ತಮ್ಮ ಕನಸನ್ನು ಅನುಸರಿಸಬೇಕು ಮತ್ತು ನವ ಭಾರತದ ನಿರ್ಮಾಣದಲ್ಲಿ ಪಾತ್ರ ವಹಿಸಬೇಕು’ ಎಂದು ಯುವ ಜನತೆಗೆ ಕರೆ ನೀಡಿದರು.
‘ಇಂದಿನ ಯುವಕರು ಬಹುಕಾರ್ಯಗಳನ್ನು ಮಾಡಲು ಸಿದ್ಧರಾಗಿದ್ದಾರೆ, ಸಾಕಷ್ಟು ಶಕ್ತಿಯನ್ನೂ ಹೊಂದಿದ್ದಾರೆ. ಭಾರತವನ್ನು ಮುಂದಕ್ಕೆ ಕೊಂಡೊಯ್ಯಲು ಎಲ್ಲರೂ ಮಹತ್ವಾಕಾಂಕ್ಷೆಯೊಂದಿಗೆ ಶ್ರಮಿಸಬೇಕು’ ಎಂದರು.
ಸಮಾಜದ ಒಳಿತಿಗಾಗಿ ಯುವಕರು ಉತ್ತಮ ಸಂವಹನವನ್ನು ಹೊಂದಬೇಕು. ವಿವಿಧ ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸಬೇಕು. ನಮ್ಮ ಮಾತುಗಳು ಆಕರ್ಷಕವಾಗಿಲ್ಲದಿದ್ದರೂ ಸ್ಪೂರ್ತಿದಾಯಕವಾಗಿರಬೇಕು’ ಎಂದರು.
ರಾಷ್ಟ್ರೀಯ ಯುವ ಸಂಸತ್ತು ಉತ್ಸವ ಉತ್ತಮ ಮಾತುಕತೆಯ ಪ್ರಕ್ರಿಯೆಯನ್ನು ಆರಂಭಿಸಲಿದೆ ಎಂದಿದ್ದಾರೆ.
15ನೇ ಲೋಕಸಭಾಕ್ಕಿಂತ 16ನೇ ಲೋಕಸಭಾದ ಫಲಿತಾಂಶ ಶೇ.20ರಷ್ಟು ಹೆಚ್ಚಾಗಿದೆ. ರಾಜ್ಯಸಭಾದ ಫಲಿತಾಂಶ ಕೇವಲ ಶೇ.8ರಷ್ಟಾಗಿದೆ ಎಂಬ ಬಗ್ಗೆ ಕಾಳಜಿಯನ್ನೂ ವಹಿಸಿದ್ದಾರೆ.
ಈ ಸಂದರ್ಭದಲ್ಲಿ ಮೋದಿಯವರು ಖೇಲೋ ಇಂಡಿಯಾ ಅಪ್ಲಿಕೇಶನನ್ನು ಬಿಡುಗಡೆಗೊಳಿಸಿದ್ದು, ಎಲ್ಲಾ ಬಗೆಗಿನ ಕ್ರೀಡಾ ಮಾಹಿತಿಗಳು ಇಲ್ಲಿ ದೊರೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.