ನವದೆಹಲಿ: ಪಾಕಿಸ್ಥಾನ ಬಲಾಕೋಟ್ನೊಳಗೆ ನುಗ್ಗಿ ಭಾರತ ನಡೆಸಿದ ವೈಮಾನಿಕ ದಾಳಿಗೆ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರ ಸಂಪೂರ್ಣ ನಾಶವಾಗಿದೆ. ಈ ಕಾರ್ಯಾಚರಣೆಯಲ್ಲಿ ಹತರಾದ 42 ಸುಸೈಡ್ ಬಾಂಬರ್ಗಳ ಮಾಹಿತಿಯು ಲಭ್ಯವಾಗಿದೆ. ಈ ಸುಸೈಡ್ ಬಾಂಬರ್ಗಳು ಭಾರತದೊಳಕ್ಕೆ ನುಸುಳಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಹೊಂಚು ಹಾಕುತ್ತಿದ್ದರು ಎಂದು ಗುಪ್ತಚರ ಇಲಾಖೆಗಳು ಮಾಹಿತಿ ನೀಡಿವೆ.
ಮರ್ಕಾಝ್ ಸೈಯದ್ ಅಹ್ಮದ್ ಶಹೀದ್ ಟ್ರೈನಿಂಗ್ ಕ್ಯಾಂಪ್ನ್ನು ಬಲಾಕೋಟ್ನಲ್ಲಿ ಮೊಹಮ್ಮದ್ ಸಲೀಂ ಅಲಿಯಾಸ್ಉಸ್ತಾದ್ ಘೌರಿಯ ನೇತೃತ್ವದಲ್ಲಿ ನಡೆಸಲಾಗುತ್ತಿತ್ತು. ಈತ ಜೈಶೇ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್ನ ಭಾವಮೈದುನ. ಮಂಗಳವಾರ ಬಳಿಗ್ಗೆ ಭಾರತೀಯ ವಾಯುಸೇನೆ ಈ ಕ್ಯಾಂಪ್ನ್ನು ಟಾರ್ಗೆಟ್ ಮಾಡಿಕೊಂಡು ದಾಳಿಯನ್ನು ನಡೆಸಿವೆ. 21 ನಿಮಿಷಗಳ ಕಾರ್ಯಾಚರಣೆಯಲ್ಲಿ ಜೈಶೇಯ ಕನಿಷ್ಠ 3 ಕಂಟ್ರೋಲ್ ರೂಮ್ಗಳನ್ನು ನಾಶ ಮಾಡಲಾಗಿದೆ.
ಭಾರತ ದಾಳಿಯಲ್ಲಿ ಸುಮಾರು 300 ಮಂದಿ ಉಗ್ರರು ಹತರಾಗಿದ್ದಾರೆ ಎನ್ನಲಾಗಿದೆ. ಆದರೆ 42 ಸುಸೈಡ್ ಬಾಂಬರ್ಗಳ ಮಾಹಿತಿಗಳು ಲಭ್ಯವಾಗಿದೆ. ಈ 42 ಮಂದಿಯಲ್ಲಿ ಬಹುತೇಕರು ರಾವಲ್ಪಿಂಡಿ ಮೂಲದವರು ಎನ್ನಲಾಗಿದೆ. ರಾವಲ್ಪಿಂಡಿ ಮಸೂದ್ ಅಝರ್ನ ಊರು ಕೂಡ ಹೌದು, ಇಲ್ಲಿನ ಮಿಲಿಟರಿ ಆಸ್ಪತ್ರೆಯಲ್ಲಿ ಪ್ರಸ್ತುತ ಆತ ಇದ್ದಾನೆ ಎನ್ನಲಾಗಿದೆ.
ಈತ ಜೈಶೇ ಅನ್ನು ಸ್ಥಾಪನೆ ಮಾಡುವುದಕ್ಕೂ ಮುನ್ನ, ಬಲಾಕೋಟ್ನಲ್ಲಿ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಶಿಬಿರವನ್ನು ನಡೆಸುತ್ತಿತ್ತು. ಅಝರ್ ಮತ್ತು ಇತರ ಹಿರಿಯ ಉಗ್ರರು ಈ ಉಗ್ರ ಶಿಬಿರಗಳಿಗೆ ಆಗಾಗ ಭೇಟಿಯನ್ನು ನೀಡುತ್ತಿದ್ದು, ಅಲ್ಲಿ ಉಗ್ರ ಬೋಧನೆಗಳನ್ನು ನೀಡುತ್ತಿದ್ದ.
ಈ ಶಿಬಿರವು ಕುನ್ಹರ ನದಿ ಸಮೀಪದಲ್ಲಿರುವ ಕಾರಣ, ತರಬೇತಿಯನ್ನು ಪಡೆಯಲು ಉಗ್ರರಿಗೆ ಸಮರ್ಥ ಸ್ಥಳವಾಗಿತ್ತು. ಭಾರತ ಮಿರಾಜ್-2000 ಯುದ್ಧ ವಿಮಾನ ಇದರ ಮೇಲೆ ಬಾಂಬ್ ಹಾಕಿದ ವೇಳೆ ಸುಮಾರು 300 ಮಂದಿ ಇಲ್ಲಿ ಇದ್ದರು ಎನ್ನಲಾಗಿದೆ. ಇಲ್ಲಿ ತರಬೇತಿಯನ್ನು ನೀಡುವ ಅನೇಕರು ಮಾಜಿ ಸೈನಿಕರಾಗಿದ್ದಾರೆ.
ಭಾರತೀಯರು ತಮ್ಮ ಶಿಬಿರದ ಮೇಲೆ ದಾಳಿ ನಡೆಸಿದ್ದನ್ನು ಮಸೂದ್ ಅಝರ್ ಒಪ್ಪಿಕೊಂಡಿದ್ದಾನೆ. ಆದರೆ ಮುಖ ಉಳಿಸಿಕೊಳ್ಳುವ ಸಲುವಾಗಿ ಈತ ದಾಳಿಯಿಂದ ಯಾವುದೇ ಹಾನಿ ಉಂಟಾಗಿಲ್ಲ. ನಮ್ಮ ಸದಸ್ಯರಿಗೆ ಯಾವ ಅಪಾಯವೂ ಆಗಿಲ್ಲ ಎಂದಿದ್ದಾನೆ.
ವರದಿಗಳ ಪ್ರಕಾರ, ಮೌಲಾನಾ ಅಮ್ಮರ್, ಮೌಲಾನಾ ತಲ್ಹಾ ಸೈಫ್, ಮುಫ್ತಿ ಅಝರ್ ಖಾನ್ ಕಾಶ್ಮೀರಿ, ಇಬ್ರಾಹಿಂ ಅಝರ್ ಹತ್ಯೆಯಾದ 300 ಉಗ್ರರ ಪೈಕಿ ಸೇರಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.