ನವದೆಹಲಿ: ಪಾಕಿಸ್ಥಾನದಲ್ಲಿನ ಉಗ್ರ ಶಿಬಿರಗಳ ಮೇಲೆ ವಾಯುಸೇನೆ ನಡೆಸಿದ ವೈಮಾನಿಕ ದಾಳಿಯ ಸಂಪೂರ್ಣ ಕಾರ್ಯಾಚರಣೆಯನ್ನು ರಾಷ್ಟ್ರಪತಿ ಭವನದ ಸೌತ್ ಬ್ಲಾಕ್ನಲ್ಲಿ ಕುಳಿತು ಪ್ರಧಾನಿ ನರೇಂದ್ರ ಮೋದಿ ಮೇಲ್ವಿಚಾರಣೆ ನಡೆಸುತ್ತಿದ್ದರು, ಕ್ಷಣ ಕ್ಷಣ ಮಾಹಿತಿಯನ್ನು ಅವರು ಪಡೆದುಕೊಳ್ಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಧಾನಿಯವರು ರಾಷ್ಟ್ರಪತಿ ಭವನದ ಸೌತ್ ಬ್ಲಾಕ್ನಲ್ಲಿನ ಸಿಚುವೇಶನ್ ರೂಮ್ನಲ್ಲಿ ಕುಳಿತು ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು ಎಂದು ತಿಳಿದು ಬಂದಿದೆ.
ವಾಯುಸೇನೆ ಮುಖ್ಯಸ್ಥ ಮಾರ್ಷಲ್ ಬಿರೇಂದರ್ ಸಿಂಗ್ ಧನೋವಾ ಅವರು ಸಂಪೂರ್ಣ ಕಾರ್ಯಾಚರಣೆಯ ಯೋಜನೆಯನ್ನು ರೂಪಿಸಿದ್ದಾರೆ. ಅವರಿಗೆ ಕಾರ್ಯಾಚರಣೆಯನ್ನು ನಡೆಸುವ ಹಲವಾರು ಆಯ್ಕೆಗಳನ್ನು ನೀಡಲಾಗಿತ್ತು. ವಾಯುಸೇನೆಗೆ ನೀಡಲಾದ ಆಯ್ಕೆಗಳ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಮೋದಿಗೆ ಮಾಹಿತಿಯನ್ನು ನೀಡಿದ್ದಾರೆ.
ಈ ಸಾಹಸಮಯ ದಾಳಿಯಲ್ಲಿ, ಭಾರತೀಯ ವಾಯುಸೇನೆಯು ವಿವಿಧ ಭಯೋತ್ಪಾದನಾ ನೆಲೆಗಳ ಮೇಲೆ, ಜೈಶೇ ಇ ಮೊಹಮ್ಮದ್ ಉಗ್ರರ ಕಂಟ್ರೋಲ್ ರೂಮ್ ಮೇಲೆ ದಾಳಿ ನಡೆಸಿ ಅದನ್ನು ಧ್ವಂಸಪಡಿಸಿದೆ.
ಭಾರತದ 12 ಮಿರಾಜ್-2000 ಯುದ್ಧ ವಿಮಾನಗಳು ಬಲಕೋಟ್, ಚಕೋತಿ, ಮುಜಾಫರ್ಬಾದ್ ಉಗ್ರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿ, 1000 ಕೆಜಿ ಬಾಂಬ್ಗಳನ್ನು ಎಸೆದು ಬಂದಿದೆ. ಇದರಲ್ಲಿ 300 ಉಗ್ರರು ಹತರಾಗಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.