ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, 2015, 2016, 2017 ಮತ್ತು 2018ರ ಸಾಲಿನ ಗಾಂಧಿ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರೂ ಉಪಸ್ಥಿತರಿದ್ದು, ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದರು.
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಲಯದಲ್ಲಿ ಸೇವೆ ಸಲ್ಲಿಸಿದ, ಅಹಿಂಸಾ ಮಾರ್ಗ, ಗಾಂಧಿ ತತ್ವದ ಮೂಲಕ ಸಮಾಜದಲ್ಲಿ ಪರಿವರ್ತನೆ ತರಲು ಪ್ರಯತ್ನಿಸುತ್ತಿರುವ ಸಂಘ ಸಂಸ್ಥೆ, ವ್ಯಕ್ತಿಗಳಿಗೆ ಗಾಂಧಿ ಶಾಂತಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಈ ಪುರಸ್ಕಾರವನ್ನು ಜನವರಿ 16ರಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಘೋಷಣೆ ಮಾಡಿತ್ತು.
ಪ್ರಧಾನಿ ನರೇಂದ್ರ ಮೋದಿ, ಮುಖ್ಯನ್ಯಾಯಮೂರ್ತಿ ರಂಜನ್ ಗೋಗಯ್, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಲೋಕಸಭಾ ವಿರೋಧ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಸಂಸದ ಎಲ್ಕೆ ಅಡ್ವಾಣಿ ಅವರನ್ನೊಳಗೊಂಡ ಜ್ಯೂರಿಗಳ ತಂಡ ಪ್ರಶಸ್ತಿಯ ವಿಜೇತರನ್ನು ಆಯ್ಕೆ ಮಾಡಿತ್ತು.
2015ನೇ ಸಾಲಿನ ಗಾಂಧೀ ಶಾಂತಿ ಪುರಸ್ಕಾರವನ್ನು ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರಕ್ಕೆ ನೀಡಲಾಗಿದೆ. ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಗಳಿಗೆ ಕೊಡುಗೆ ನೀಡಿದ್ದಕ್ಕಾಗಿ ಈ ಪುರಸ್ಕಾರ ಈ ಸಂಸ್ಥೆಗೆ ಸಂದಿದೆ.
2016ನೇ ಸಾಲಿನ ಪುರಸ್ಕಾರ, ದೇಶದಾದ್ಯಂತ ಮಧ್ಯಾಹ್ಮದ ಬಿಸಿಯೂಟ ಪೂರೈಸುವ ಅಕ್ಷಯಪಾತ್ರ ಫೌಂಡೇಶನ್ಗೆ ಮತ್ತು ದೇಶದಲ್ಲಿ ನೈರ್ಮಲ್ಯ ವೃದ್ಧಿಸುತ್ತಿರುವ ಸುಲಭ್ ಇಂಟರ್ನ್ಯಾಷನಲ್ಗೆ ಜಂಟಿಯಾಗಿ ಸಿಕ್ಕಿದೆ.
2017ನೇ ಸಾಲಿನ ಪುರಸ್ಕಾರ, ಗ್ರಾಮೀಣ ಮತ್ತು ಬುಡಕಟ್ಟು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಎಕಲ್ ಅಭಿಯಾನ್ ಟ್ರಸ್ಟ್ಗೆ ಸಿಕ್ಕಿದೆ.
2018ನೇ ಸಾಲಿನ ಪುರಸ್ಕಾರ, ಕುಷ್ಠರೋಗದ ಬಗ್ಗೆ ದೇಶ, ವಿದೇಶದಲ್ಲಿ ಅರಿವು ಮೂಡಿಸುತ್ತಿರುವ ಶ್ರೀ ಯೊಹೇಸಸಕವ ಸಂಸ್ಥೆಗೆ ಸಿಕ್ಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.