ನವದೆಹಲಿ: ರಾಷ್ಟ್ರೀಯ ಮಟ್ಟದ ‘ಸಂಶೋಧನೆ ಉತ್ತೇಜನಕ್ಕಾಗಿ ಬರವಣಿಗೆ ಕೌಶಲ್ಯದ ವೃದ್ಧಿ'(Augmenting Writing Skills for Articulating Research (AWSAR)’ ಸ್ಪರ್ಧೆನಲ್ಲಿ ವಿಜೇತರಾದ ನಾಲ್ಕು ಮಂದಿ ಯುವ ವಿಜ್ಞಾನಿಗಳಿಗೆ ಫೆ.28ರ ರಾಷ್ಟ್ರೀಯ ವಿಜ್ಞಾನ ದಿನದಂದು ವಿಜ್ಞಾನ ಪುರಸ್ಕಾರ ದೊರಕಲಿದೆ.
ಈ ಸ್ಪರ್ಧೆಯ ಪಿಎಚ್ಡಿ ಕೆಟಗರಿಯಲ್ಲಿ ವಿಜೇತರಾದ ಮುಂಬಯಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಆಶಿಶ್ ಶ್ರೀವಾಸ್ತವ ಅವರಿಗೆ ರೂ.1ಲಕ್ಷ ನಗದು ಪುರಸ್ಕಾರ ದೊರಕಲಿದೆ. ಐಐಟಿ ಮದ್ರಾಸ್ನ ಅಜಯ್ ಕುಮಾರ್ ಅವರು ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು, ರೂ.50 ಸಾವಿರ ನಗದು ಪುರಸ್ಕಾರ ಪಡೆಯಲಿದ್ದಾರೆ. ಮೂರನೇ ಸ್ಥಾನವನ್ನು ಕೋಲ್ಕತ್ತಾದ ನಬನಿತ ಚಕ್ರಬರ್ತಿ ಕೈಗೊಂಡಿದ್ದು, ರೂ.25 ಸಾವಿರ ಪುರಸ್ಕಾರ ಪಡೆಯಲಿದ್ದಾರೆ.
ಪಿಎಚ್ಡಿಯ ಬಳಿಕದ ಕೆಟಗರಿಯಲ್ಲಿ ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ವಿದ್ಯಾರ್ಥಿ ಡಾ.ಪೌಲೊಮಿ ಅವರು ಮೊದಲ ಸ್ಥಾನವನ್ನು ಜಯಿಸಿ, ರೂ.1 ಲಕ್ಷ ನಗದು ಪುರಸ್ಕಾರವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇವರನ್ನು ಹೊರತುಪಡಿಸಿ ಪಿಎಚ್ಡಿ ಕೆಟಗರಿಯಲ್ಲಿ 100 ವಿಜ್ಞಾನಿಗಳಿಗೆ, ಪಿಎಚ್ಡಿ ಬಳಿಕದ ಕೆಟಗರಿಯಲ್ಲಿ 20 ಸಂಶೋಧಕರಿಗೆ ರೂ.10000 ಪುರಸ್ಕಾರ ದೊರಕಲಿದೆ.
ನವದೆಹಲಿಯಲ್ಲಿ ಫೆ.28ರಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಆಯೋಜನೆಗೊಳಿಸುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.