ನವದೆಹಲಿ: ಭಾರತ ಸ್ವಾತಂತ್ರ್ಯ ಪಡೆದ ಬಳಿಕ, 1947 ರಿಂದ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಸ್ಮರಣಾರ್ಥ ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಿಸಲಾದ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆಗೊಳಿಸಿದ್ದಾರೆ. ದೇಶದ ವೀರ ಯೋಧರಿಗೆ ಅತ್ಯುನ್ನತ ಗೌರವವನ್ನು ಸಲ್ಲಿಸುವ ಉದ್ದೇಶದೊಂದಿಗೆ ಇದನ್ನು ಸ್ಥಾಪನೆ ಮಾಡಲಾಗಿದೆ. ಈ ಸ್ಮಾರಕದ ಕಲ್ಲಿನಲ್ಲಿ ಹುತಾತ್ಮರಾದ 25,942 ಯೋರ ಹೆಸರನ್ನು ಬರೆಯಲಾಗಿದೆ.
ಸ್ಮಾರಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಮೋದಿ, ನಮ್ಮ ಯೋಧರ ತ್ಯಾಗದಿಂದಾಗಿ ಇಂದು ನಮ್ಮ ಸೇನೆ ವಿಶ್ವದ ಅತ್ಯಂತ ಬಲಿಷ್ಠ ಸೇನೆಗಳಲ್ಲೊಂದಾಗಿದೆ. ಪ್ರಕೃತಿಯಿಂದಾಗಲಿ ಅಥವಾ ಶತ್ರುಗಳಿಂದಾಗಲಿ ಸಮಸ್ಯೆಗಳು ಎದುರಾದಾಗ ಮುಂದೆ ನಿಂತು ದೇಶದ ರಕ್ಷಣೆ ಮಾಡುತ್ತಿರುವವರು ನಮ್ಮ ಯೋಧರು. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಎಲ್ಲಾ ಯೋಧರಿಗೂ ಗೌರವಾರ್ಪಣೆ ಮಾಡಿ ಸ್ಮರಿಸುತ್ತೇನೆ ಎಂದರು.
ನವಭಾರತವು ಹೊಸ ಮೌಲ್ಯಗಳೊಂದಿಗೆ ಮುಂದುವರೆದಿದೆ. ಇದು ನಿಮ್ಮೆಲ್ಲರ ಸಕ್ರಿಯ ಕಾರಣದಿಂದಾಗಿ. ಲತಾ ಮಂಗೇಶ್ಕರ್ ಅವರು ಮೇರೆ ವತನ್ ಕೆ ಲೋಗೋ ಹಾಡಿದಾಗ ನಾವೆಲ್ಲರೂ ಭಾವುಕರಾದೆವು. ಯುದ್ಧ ಸ್ಮಾರಕಕ್ಕಾಗಿ ಕಾಯುವಿಕೆ ಅಂತ್ಯಗೊಂಡಿದೆ. ಇಂದು ಸರಿಯಾದ ಸಮಯದಲ್ಲೇ ಅದು ದೇಶಕ್ಕೆ ಸಮರ್ಪಣೆಯೂ ಆಗಿದೆ ಎಂದು ಹೇಳಿದರು.
OROP ವತಿಯಿಂದ 35,000 ಕೋಟಿಯನ್ನು ಹಂಚಿಕೆ ಮಾಡಲಾಗಿದೆ. ಪೆನ್ಶನ್ ಬಜೆಟ್ ಈಗ 1 ಲಕ್ಷ ಕೋಟಿಗೆ ತಲುಪಿದೆ. ಯೋಧರ ವೇತನಗಳನ್ನು ಶೇಕಡ 55 ರಷ್ಟು ಹೆಚ್ಚಳ ಮಾಡಲಾಗಿದೆ. ಪಿಂಚಣಿ ಪಡೆಯಲು ವಿಳಂಬ ಧೋರಣೆಯನ್ನು ನಾವು ಬಿಟ್ಟಿದ್ದೇವೆ. ಆನ್ಲೈನ್ ಮೂಲಕವೇ ಈ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಒಂದು ಸುದೀರ್ಘ ಅವಧಿಯ ಬೇಡಿಕೆಯಾಗಿದ್ದು ನಾವು ಮೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದ್ದೇವೆ ಎಂದು ಘೋಷಿಸಲು ಸಂತೋಷವಾಗುತ್ತಿದೆ ಎಂದರು.
ಮಹಿಳೆಯರು ಈಗ ಫೈಟರ್ ಪೈಲೆಟ್ಗಳಾಗಿದ್ದಾರೆ. ಶಸ್ತ್ರಾಸ್ತ್ರ ಪಡೆಗಳಲ್ಲಿ ಮಹಿಳೆಯರು ಸಮಾನ ಪ್ರತಿನಿಧಿತ್ವ ಪಡೆಯಲಿ ಎಂಬುದನ್ನು ನಾವು ಖಾತ್ರಿ ಮಾಡುತ್ತಿದ್ದೇವೆ. ನಮ್ಮ ಸೈನಿಕರ ಮಹತ್ವದ ಬಗ್ಗೆ ಪ್ರತಿಯೊಬ್ಬ ಮಗುವಿಗೂ ಅರಿವಿರಬೇಕು ಎಂಬ ಆಶಯ ನಮ್ಮದು ಇದಕ್ಕಾಗಿ ಶೌರ್ಯ ಪ್ರಶಸ್ತಿಗಳಿಗಾಗಿ ಆನ್ ಲೈನ್ ಬೇಡಿಕೆಯನ್ನು ನಾವು ಸ್ಥಾಪನೆ ಮಾಡಿದ್ದೇವೆ.
ರಕ್ಷಣಾ ನೇಮಕಾತಿ ಪ್ರಕ್ರಿಯೆಯಲ್ಲೂ ಹಲವಾರು ಬದಲಾವಣೆಗಳನ್ನು ತಂದಿದ್ದೇವೆ. 1,46 ಸಾವಿರ ಬುಲೆಟ್ ಪ್ರೂಫ್ ಜಾಕೆಟ್ಗಳಿಗೆ ಶಸ್ತ್ರಾಸ್ತ್ರ ಪಡೆಗಳಿಂದ ಬೇಡಿಕೆ ಇತ್ತು. ನಮ್ಮ ಯೋಧರು ಈ ಜಾಕೆಟ್ ಗಳನ್ನು ಹಾಕದೆ ಶತ್ರುಗಳನ್ನು ಎದುರಿಸುವ ಪರಿಸ್ಥಿತಿ ಇತ್ತು. 2019 ಮತ್ತು 2014 ರ ನಡುವೆ ಅವರ ೀ ಬೇಡಿಕೆಗಳು ಈಡೇರಿರಲಿಲ್ಲ. ಕಳೆದ 5 ವರ್ಷಗಳಲ್ಲಿ ನಾವು 2,30,00 ಬುಲೆಟ್ ಪ್ರೂಫ್ ಜಾಕೆಟ್ಗಳನ್ನು ಖರೀದಿ ಮಾಡಿದ್ದೇವೆ.
ರಫೇಲ್ ಡೀಲ್ ಅನ್ನು ವಿಫಲಗೊಳಿಸಲು ಪ್ರತಿಪಕ್ಷಗಳು ಸಾಕಷ್ಟು ಪ್ರಯತ್ನ ನಡೆಸಿದೆ. ಆದರೆ ಭಾರತ ಶೀಘ್ರದಲ್ಲೇ ಮೊದಲ ರಫೇಲ್ ಅನ್ನು ಪಡೆಯಲಿದೆ.
ದೇಶದ ಸುರಕ್ಷತೆ, ಅಭಿವೃದ್ಧಿ ನಮಗೆ ಎಲ್ಲದಕ್ಕಿಂತಲೂ ಪ್ರಮುಖವಾಗಬೇಕು. ದೇಶಕ್ಕಾಗಿ ಬದುಕುವ, ದೇಶಕ್ಕಾಗಿ ಸಾಯುವ, ತಿರಂಗಕ್ಕಾಗಿ ಬದುಕುವ, ತಿರಂಗಕ್ಕಾಗಿ ಮಡಿಯುವ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು.
ಈ ಯದ್ಧ ಸ್ಮಾರಕವು ಇಂಡಿಯಾ ಗೇಟ್ ಸಮೀಪ ಸುಮಾರು 40 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ನಾಲ್ಕು ಚಕ್ರಗಳ ಮಾದರಿಯಲ್ಲಿ ಇದು ರಚನೆಗೊಂಡಿದ್ದು, ನಾಲ್ಕು ಚಕ್ರಗಳು ನಾಲ್ಕು ಸೇನಾಪಡೆಗಳ ಮಹತ್ವವನ್ನು ಸಾರುತ್ತದೆ. ಅಮರ್ ಚಕ್ರ ಎಂಬ ಒಳಗಿನ ಚಕ್ರದಲ್ಲಿ ದೀಪ ಉರಿಯುತ್ತಿರಲಿದೆ.
ಚೌಕ ಸೂಜಿಯಂಥಹ ಕಂಬ 15.5 ಮೀಟರ್ ಎತ್ತರ ಇದ್ದು, ಕಾಂಪ್ಲೆಕ್ಸ್ನೊಳಗೆ ಪ್ರವೇಶಿಸುವಾಗಲೇ ದೂರದಿಂದಲೇ ಇದು ವೀಕ್ಷಕರ ಕಣ್ಣಿಗೆ ಬೀಳುತ್ತದೆ.
ವೀರ್ತಾ ಚಕ್ರ ಕಂಚಿನ ಭಿತ್ತಿಚಿತ್ರಗಳನ್ನು ಹೊಂದಿದ್ದು, ವಿವಿಧ ಯುದ್ಧಗಳನ್ನು ಬಿಂಬಿಸುತ್ತದೆ. ಪ್ರತಿ ಭಿತ್ತಿ ಚಿತ್ರ 600 ಕೆಜಿಯಿಂದ 1,000 ಕೆಜಿ ತೂಕವಿದೆ.
ತ್ಯಾಗ ಚಕ್ರವನ್ನು ಸಂಪೂರ್ಣವಾಗಿ ಗ್ರಾನೈಟ್ ಬ್ರಿಕ್ಸ್ನಿಂದ ರಚನೆ ಮಾಡಲಾಗಿದ್ದು, ಸ್ವಾತಂತ್ರ್ಯದ ಬಳಿಕ ಹುತಾತ್ಮರಾದ ಯೋಧರ ಹೆಸರನ್ನು ಒಳಗೊಂಡಿದೆ.
ಕೊನೆಯ ರಕ್ಷಕ್ ಚಕ್ರ ಇತರ ಮೂರು ಚಕ್ರಗಳನ್ನು ಸುತ್ತು ಹಾಕುತ್ತದೆ, ಗೋಡೆಯಂತೆ ಕಾರ್ಯನಿರ್ವಹಿಸುವ 600 ಮರಗಳನ್ನು ಹೊಂದಿದೆ, ಇದು ದೇಶವನ್ನು ಯೋಧರು ರಕ್ಷಿಸುತ್ತಿದ್ದಾರೆ ಎಂಬುದನ್ನು ಪ್ರತಿನಿಧಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.