ಮುಂಬಯಿ: 2017ರ ಡಿಸೆಂಬರ್ನಲ್ಲಿ ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಭಾರತ-ಚೀನಾ ಗಡಿಯಲ್ಲಿ ಹುತಾತ್ಮರಾದ ಯೋಧ ಮೇಜರ್ ಪ್ರಸಾದ್ ಮಹದೀಕ್ ಅವರ ಪತ್ನಿ ಸೇನೆಗೆ ಸೇರಲು ಸಜ್ಜಾಗಿದ್ದಾರೆ. ತಮ್ಮ ಪತಿಯ ಗೌರವಾರ್ಥ ಅವರು ಈ ಕಾರ್ಯ ಮಾಡುತ್ತಿದ್ದಾರೆ.
32 ವರ್ಷದ ಮುಂಬಯಿ ವಿರಾರ್ ಮೂಲಕ ಗೌರಿ ಮಹದೀಕ್ ಅವರು ಶೀಘ್ರದಲ್ಲೇ ಸೇನೆಯನ್ನು ಸೇರ್ಪಡೆಯಾಗುತ್ತಿದ್ದಾರೆ. ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡಮಿಯಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ಬಳಿಕ ಮುಂದಿನ ವರ್ಷ ಅವರು ನಾನ್ ಟೆಕ್ನಿಕಲ್ ಕೆಟಗರಿಯ ಲೆಫ್ಟಿನೆಂಟ್ ಆಗಿ ಸೇನೆಯನ್ನು ಸೇರಲಿದ್ದಾರೆ.
2015ರಲ್ಲಿ ಮೇಜರ್ ಪ್ರಸಾದ್ ಅವರನ್ನು ವಿವಾಹವಾಗಿದ್ದ ಗೌರಿಯವರು, ತಮ್ಮ ಪತಿಯ ನಿಧನದ ಬಳಿಕ ವಕೀಲಿ ವೃತ್ತಿಯನ್ನು ತೊರೆದು ಭಾರತೀಯ ಸೇನೆಯನ್ನು ಸೇರುವತ್ತ ಚಿಂತನೆ ನಡೆಸಿದ್ದಾರೆ. ಕಳೆದ ವರ್ಷವೇ ಎಸ್ಎಸ್ಬಿ ಪರೀಕ್ಷೆಯನ್ನು ಬರೆದಿದ್ದಾರೆ. ಆದರೆ ತೇರ್ಗಡೆಯಾಗಿರಲಿಲ್ಲ. ಈ ಬಾರಿ ತಮ್ಮ ಫಿಟ್ನೆಸ್ನ್ನು ಸುಧಾರಣೆಪಡಿಸಿಕೊಂಡು ಅವರು ತರಬೇತಿಗೆ ಆಯ್ಕೆಯಾಗಿದ್ದಾರೆ.
ಮೇಜರ್ ಪ್ರಸಾದ್ ಅವರು, 2017ರ ಡಿ.30ರಂದು ಹುತಾತ್ಮರಾಗಿದ್ದಾರೆ, 15 ಸಾವಿರ ಅಡಿ ಎತ್ತರದಲ್ಲಿ ಮೈನಸ್ 15 ಡಿಗ್ರಿಯಲ್ಲಿ ನಿಯೋಜನೆಗೊಂಡಿದ್ದ ಅವರ ವಸತಿಯಲ್ಲಿ ಬೆಂಕಿ ಕಾಣಿಸಿಕೊಂಡು ಅದರಿಂದ ಹೊರ ಬರಲಾರದೆ ಅವರು ಜೀವ ಕಳೆದುಕೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.