ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿಧಿಸುತ್ತಿರುವ ವಾರಣಾಸಿಯಲ್ಲಿನ ಮಂಡುವಾಡ್ಹಿ ರೈಲು ನಿಲ್ದಾಣ ಈಗ ಎಲ್ಲರ ಗಮನವನ್ನು ಸೆಳೆದಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದುವ ಮೂಲಕ ಇದು ವಿಶ್ವದರ್ಜೆಗೇರಿದೆ. ಕೇಂದ್ರ ರೈಲ್ವೇ ಸಚಿವ ಪಿಯೂಶ ಗೋಯಲ್ ಅವರು ಇದರ ಫೋಟೋಗಳನ್ನು ಟ್ವಿಟ್ನಲ್ಲಿ ಹಂಚಿಕೊಂಡಿದ್ದು, ಅದು ಈಗಾಗಲೇ ವೈರಲ್ ಆಗಿದೆ.
ವಾರಣಾಸಿಯಲ್ಲಿರುವ ನಾಲ್ಕು ರೈಲ್ವೇ ನಿಲ್ದಾಣಗಳ ಪೈಕಿ ಮಂಡುವಾಡ್ಹಿ ರೈಲು ನಿಲ್ದಾಣ ಕೂಡ ಒಂದಾಗಿದ್ದು. ನಾರ್ತ್ ಈಸ್ಟರ್ನ್ ರೈಲ್ವೇ ಝೋನ್ನಡಿ ಬರುತ್ತದೆ. ವಾರಣಾಸಿ ಜಂಕ್ಷನ್ನ ಜನನಿಬಿಡತೆಯನ್ನು ಇದು ನಿರ್ವಹಿಸುತ್ತದೆ. ಇಲ್ಲಿ ಈಗ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಹೊಸ ಪ್ಲಾಟ್ಫಾರ್ಮ್, ಉನ್ನತ ದರ್ಜೆಯ ವೇಟಿಂಗ್ ರೂಮ್, ಟಿಕೆಟ್ ಬುಕ್ಕಿಂಗ್ ಕೌಂಟರ್, ರೆಸ್ಟೋರೆಂಟ್, ಟಾಯ್ಲೆಟ್ಸ್ ರಿಟೈರಿಂಗ್ ರೂಮ್ಗಳು ಇಲ್ಲಿ ನಿರ್ಮಾಣ ಆಗಿವೆ.
ಈ ರೈಲು ನಿಲ್ದಾಣದ ಹೊಸ ವಿನ್ಯಾಸ ವಾರಣಾಸಿಯ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಇಲ್ಲಿ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. 8 ಪ್ಲಾಟ್ಫಾರ್ಮ್ಗಳನ್ನು ಇದು ಹೊಂದಿದ್ದು, ಇಲ್ಲಿಂದ 8 ರೈಲುಗಳು ಹೊರಡುತ್ತವೆ.
ಕೇಂದ್ರ ಸರ್ಕಾರ ಈ ರೈಲು ನಿಲ್ದಾಣದ ಹೆಸರನ್ನು ‘ಬನಾರಸ್ ರೈಲು ನಿಲ್ದಾಣ’ ಎಂದು ಬದಲಿಸುವ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಪತ್ರ ಬರೆದಿದ್ದಾರೆ.
ವಾರಣಾಸಿಯನ್ನು ಬನಾರಸ್ ಮತ್ತು ಕಾಶಿ ಎಂದೂ ಕರೆಯಲಾಗುತ್ತದೆ. ಮೋದಿಯವರು ಪ್ರಧಾನಿಯಾದ ಬಳಿಕ ಇಲ್ಲಿ ಅಭಿವೃದ್ಧಿ ಕಾರ್ಯಗಳು ಗರಿಗೆದರಿದ್ದು, ಎಲ್ಲ ಆಕರ್ಷಣೆಯ ಕೇಂದ್ರವಾಗಿ ಬದಲಾಗಿದೆ.
वाराणसी का मंडुआडीह स्टेशन विश्वस्तरीय सुविधाओं के साथ अपनी स्वच्छता और सौंदर्यीकरण से यात्रियों को एक नया अनुभव प्रदान कर रहा है। काशी के प्राचीन वैभव को पुनः जीवित करता यह स्टेशन देश के सबसे सुंदर स्टेशनों में से एक बनने जा रहा है। pic.twitter.com/9FokKNgQHj
— Piyush Goyal (@PiyushGoyal) February 21, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.