ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಅಧಿಕಾರಕ್ಕೆ ಏರದಿದ್ದರೆ ದೇಶ 50 ವರ್ಷಗಳ ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಚಿಂತಕರ ವೇದಿಕೆ ಆಯೋಜನೆಗೊಳಿಸಿದ್ದ ಅನೌಪಚಾರಿಕ ಸಂವಾದದಲ್ಲಿ ಮಾತನಾಡಿದ ಅವರು, ’ಸ್ಪಷ್ಟ ಬಹುಮತವುಳ್ಳ, ಅತ್ಯುತ್ತಮ ಸರ್ಕಾರವನ್ನು ಆಯ್ಕೆ ಮಾಡುವ ಅವಕಾಶವನ್ನು ಕಳೆದುಕೊಂಡರೆ ದೇಶಕ್ಕೆ 50 ವರ್ಷಗಳ ಹಿನ್ನಡೆಯಾಗುತ್ತದೆ. ಬಿಜೆಪಿಯ ಕಾರ್ಯಗಳನ್ನು ಪರಿಗಣಿಸದೇ ಹೋದರೆ ದೇಶ ನವ ಮತದಾರರ ಉತ್ಸಾಹವನ್ನು ಕುಗ್ಗಿಸದಂತಾಗುತ್ತದೆ’ ಎಂದಿದ್ದಾರೆ.
’20ನೇ ಶತಮಾನದಲ್ಲಿ ಜನಿಸಿದ ನಾವು, ದೇಶದ ಬಗ್ಗೆ ಬದ್ಧತೆ ಇಲ್ಲದೆ, ಸ್ವಚ್ಛ ರಾಜಕೀಯದ ಬಗ್ಗೆ ಬದ್ಧತೆ ಇಲ್ಲದವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದರೆ ನವ ಮತದಾರರಿಗೆ ಅನ್ಯಾಯ ಮಾಡಿದಂತಾಗುತ್ತದೆ’ ಎಂದಿದ್ದಾರೆ.
ಮೋದಿಯವರ ಸಾಧನೆಗಳನ್ನು ಕೊಂಡಾಡಿದ ಸೀತಾರಾಮನ್ ಅವರು, ’ಯಾವುದೇ ದೇಶವು ತನ್ನ ಇತಿಹಾಸದಲ್ಲಿ, ನಾವು ಇಂದು ಪಡೆದಂತಹ ನಾಯಕತ್ವವನ್ನು ಪಡೆದುಕೊಳ್ಳುವುದು ಅತ್ಯಂತ ವಿರಳ’ ಎಂದಿದ್ದಾರೆ.
2014-2019ರವರೆಗೆ ದೇಶದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಸುಳಿವೂ ಕಂಡಿಲ್ಲ ಎಂದಿದ್ದಾರೆ.
‘ಕಳೆದ ಐದು ವರ್ಷಗಳಿಂದ ಅವಿರತವಾಗಿ ಕೆಲಸ ಮಾಡಲಾಗಿದೆ. ಒಂದೇ ಒಂದು ರಜೆಯನ್ನೂ ಪ್ರಧಾನಿಗಳು ಪಡೆದುಕೊಂಡಿಲ್ಲ. ನಮ್ಮ ಎಲ್ಲಾ ಸಚಿವಾಲಯಗಳಿಗೂ ಉತ್ತೇಜನ, ಪ್ರೇರಣೆಗಳನ್ನು ನೀಡಲಾಗಿದೆ. ಒಂದೇ ಒಂದು ಭ್ರಷ್ಟಾಚಾರದ ಸುಳಿವೂ ಸಿಕ್ಕದೆ ಇರುವುದು ನಮ್ಮ ಮತ್ತು ಹಿಂದಿನ ಸರ್ಕಾರದ ನಡುವೆ ಇರುವ ವ್ಯತ್ಯಾಸ. ಅದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸದಾ ಏನಾದರೊಂದು ವಿಷಯವನ್ನು ಹಬ್ಬಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ’ ಎಂದರು.
2019ರ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಇದನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಪ್ರಚಾರದ ವಿಷಯದಲ್ಲಿ 2014ರಲ್ಲಿ ಮಾಡಿದ್ದಕ್ಕಿಂತಲೂ ಇಲ್ಲಿ ಹೆಚ್ಚಿನದನ್ನು ಮಾಡಬೆಕಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.