ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ 800 ಕೆಜಿ ತೂಕದ ಬೃಹತ್ ಭಗವದ್ಗೀತೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಭಗವದ್ಗೀತೆ 670 ಪುಟಗಳನ್ನು ಹೊಂದಿದು, 2.8 ಮೀಟರ್ ಉದ್ದ ಮತ್ತು 2 ಮೀಟರ್ ಅಗಲವಿದೆ. ನವದೆಹಲಿಯ ಇಸ್ಕಾನ್ ದೇಗುಲದ ಆವರಣದಲ್ಲಿ ಇದು ಲೋಕಾರ್ಪಣೆಯಾಗಲಿದೆ.
ಇಟಲಿಯ ಮಿಲಾನ್ನಲ್ಲಿ ಈ ಭಗವದ್ಗೀತೆಯನ್ನು ಮುದ್ರಣ ಮಾಡಲಾಗಿದ್ದು, ವಾಟರ್ಪ್ರೂಫ್ ಸಿಂಥೆಟಿಕ್ ಹಾಳೆಗಳ ಮೇಲೆ 18 ಅತ್ಯುತ್ಕೃಷ್ಟ ಚಿತ್ರಗಳನ್ನು ಮತ್ತು ಮನಮೋಹಕ ವಿನ್ಯಾಸವನ್ನು ಈ ಭಗವದ್ಗೀತೆ ಹೊಂದಿದೆ. ಇದರ ರಚನೆಗಾಗಿ ರೂ.1.5 ಕೋಟಿಯನ್ನು ವ್ಯಯಿಸಲಾಗಿದೆ. ದೇಶ ವಿದೇಶಗಳ ದಾನಿಗಳ ನೆರವನ್ನು ಪಡೆದು ಇಟಲಿಯ ಇಸ್ಕಾನ್ ಘಟಕ ಇದನ್ನು ರಚನೆ ಮಾಡಿದೆ.
ಪುಸ್ತಕದ ಮುಖಪುಟದಲ್ಲಿನ ಕೃಷ್ಣ ಮತ್ತು ಅರ್ಜುನ ಚಿತ್ರಗಳನ್ನು ಬೆಳ್ಳಿ, ಬಂಗಾರ ಮುಂತಾದ ಅತ್ಯಮೂಲ್ಯ ಲೋಹ ಮತ್ತು ಹರಳುಗಳನ್ನು ಬಳಸಿ ರಚಿಸಲಾಗಿದೆ.
ಪ್ರಧಾನಿ ಮೋದಿಯವರು ಫೆ.26ರಂದು ಈ ಭಗವದ್ಗೀತೆಯನ್ನು ಲೋಕಾರ್ಪಣೆಗೊಳಿಸಲಿದ್ದು, ಈ ವೇಳೆ ಆಧ್ಯಾತ್ಮಿಕ ಗುರುಗಳು, ಸಮಾಜ ಸೇವಕರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ.
ಹರೇ ಕೃಷ್ಣ ಚಳುವಳಿಗೆ ಹೆಸರುವಾಸಿಯಾಗಿರುವ ಇಸ್ಕಾನ್ ವಿಶ್ವದಾದ್ಯಂತ ಶ್ರೀಕೃಷ್ಣ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿದೆ. ವಿಶ್ವದ ನಾನಾ ಭಾಗಗಳಲ್ಲಿ 400 ದೇಗುಲವನ್ನು ಹೊಂದಿರುವ ಇದು, 100 ಶಾಖಾಹಾರಿ ರೆಸ್ಟೋರೆಂಟ್ಗಳನ್ನು ನಡೆಸುತ್ತಿದೆ ಮತ್ತು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.