ನವದೆಹಲಿ: ವಾರಣಾಸಿ-ದೆಹಲಿಗೆ ಸಂಚರಿಸುವ ‘ವಂದೇ ಭಾರತ್ ಎಕ್ಸ್ಪ್ರೆಸ್’ಗೆ ಇತ್ತೀಚಿಗೆ ಮೋದಿ ಚಾಲನೆಯನ್ನು ನೀಡಿದ್ದರು, ಶೀಘ್ರದಲ್ಲೇ ಈ ರೈಲು ಬೆಂಗಳೂರು-ಮಂಗಳೂರು, ಮಂಗಳೂರು-ಚೆನ್ನೈ ಮತ್ತು ಮಂಗಳೂರು-ಹೈದರಾಬಾದ್ ಮಾರ್ಗವಾಗಿ ಚಲಿಸುವ ನಿರೀಕ್ಷೆ ಇದೆ. ಈ ಬಗ್ಗೆ ರೈಲ್ವೇ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ಅತ್ಯಂತ ವೇಗದ ರೈಲಾಗಿದ್ದು, ದೇಶೀಯವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಗೋಯಲ್ ಹೇಳಿದ್ದಾರೆ. ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆಯನ್ನೂ ಈ ರೈಲಿನ ಮಾರ್ಗಗಳಲ್ಲಿ ಅಳವಡಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಫೆ.15ರಂದು ಪ್ರಧಾನಿ ನರೇಂದ್ರ ಮೋದಿಯವರು ಎಂಜಿನ್ ಲೆಸ್, ಸೆಮಿ ಹೈಸ್ಪೀಡ್ ಎಕ್ಸ್ಪ್ರೆಸ್ ’ವಂದೇ ಭಾರತ್ ಎಕ್ಸ್ಪ್ರೆಸ್’ಗೆ ಚಾಲನೆಯನ್ನು ನೀಡಿದ್ದರು. ಈ ರೈಲು ವಾರಾಣಸಿ-ದೆಹಲಿ ಮಾರ್ಗವಾಗಿ ಚಲಿಸಲಿದೆ. ಜಿಪಿಎಸ್ ಪ್ರಯಾಣಿಕ ಮಾಹಿತಿ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ, ಟಾಕ್ಬ್ಯಾಕ್ ಫೆಸಿಲಿಟಿ ಘಟಕಗಳು ಇದರಲ್ಲಿವೆ. ತುರ್ತು ಸಂದರ್ಭದಲ್ಲಿ ಇದು ಚಾಲಕನನ್ನು ಕನೆಕ್ಟ್ ಮಾಡುತ್ತದೆ.
ಗಂಟೆಗೆ 180 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ರೈಲಿಗಿದೆ. ಚೆನ್ನೈನ್ನ ಯಸಿಎಫ್ ಇದನ್ನು 11 ತಿಂಗಳಲ್ಲಿ ತಯಾರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.