ನವದೆಹಲಿ: ಪುಲ್ವಾಮ ದಾಳಿಗೆ ಜವಾಬ್ದಾರನಾದ ಪಾಕಿಸ್ಥಾನದ ವಿರುದ್ಧ ನಿರ್ಣಾಯಕ ಯುದ್ಧವನ್ನು ಗೆಲ್ಲಲ್ಲು ಭಾರತ ರಾಜತಾಂತ್ರಿಕ ವಿಧಾನ ಸೇರಿದಂತೆ ಎಲ್ಲಾ ಆಯ್ಕೆಗಳನ್ನೂ ಅನುಷ್ಠಾನಗೊಳಿಸಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಪಾಕಿಸ್ಥಾನವನ್ನು ರಾಕ್ಷಸ ರಾಜ್ಯ ಎಂದು ಬಣ್ಣಿಸಿರುವ ಅವರು, ದಾಳಿಕೋರರು ನಾವೇ ದಾಳಿ ನಡೆಸಿದ್ದು ಎಂದು ಹೇಳಿದರೂ ಇವರ ವಿರುದ್ಧ ಪಾಕಿಸ್ಥಾನ ಕ್ರಮಕೈಗೊಳ್ಳುವುದಿಲ್ಲ ಎಂದು ಆರೋಪಿಸಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಭಾಷಣಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ’ಅಲ್ಲಿನ ಸರ್ಕಾರ ಮುಖ್ಯಸ್ಥರು ಹೇಳುತ್ತಾರೆ ಕ್ರಮ ತೆಗೆದುಕೊಳ್ಳಲು ಅರ್ಹವಾದ ಗುಪ್ತಚರ ಮಾಹಿತಿ ನೀಡಿ ಎಂದು. ಅಪರಾಧಿ ಯಾರೆಂದು ಗೊತ್ತಿಲ್ಲದಿದ್ದಾಗ ಮಾಹಿತಿಯನ್ನು ನೀಡಬೇಕು, ಆದರಿಲ್ಲಿ ಅಪರಾಧಿ ಅವರ ದೇಶದಲ್ಲೇ ಕುಳಿತುಕೊಂಡು ನಾನೇ ಅಪರಾಧ ಮಾಡಿದ್ದು ಎನ್ನುತ್ತಿದ್ದಾನೆ ಇಂತಹ ಸಂದರ್ಭದಲ್ಲಿ ಬೇರೇನು ಸಾಕ್ಷಿ ಬೇಕು’ ಎಂದು ಪ್ರಶ್ನಿಸಿದ್ದಾರೆ.
‘ಈ ವಿಷಯದಲ್ಲಿ ಅವರು ಹುಲಿಯ ಮೇಲೆ ಸವಾರಿ ಮಾಡುತ್ತಿದ್ದಾರೆ, ಆದರೆ ಆ ಹುಲಿ ತನ್ನ ಮಾಲೀಕನನ್ನೂ ಬಿಡದಂತಾಗಿದೆ’ ಎಂದು ಜೇಟ್ಲಿ ಪಾಕಿಸ್ಥಾನ ನಾಯಕತ್ವದ ಬಗ್ಗೆ ವ್ಯಂಗ್ಯವಾಡಿದ್ದಾರೆ.
‘ನಾನು ಜೀವನದಲ್ಲಿ ಯುದ್ಧ, ಮಾನವ ದುರಂತ, ಭಯೋತ್ಪಾದಕರಿಂದ ಪ್ರಧಾನಿಗಳ ಹತ್ಯೆಗಳನ್ನು ನೋಡಿದ್ದೇನೆ. ಆದರೆ ಈ ಬಾರಿಯ ದಾಳಿಗೆ ವ್ಯಕ್ತವಾದಂತಹ ಆಕ್ರೋಶವನ್ನು ನಾನೆಂದೂ ಕಂಡಿಲ್ಲ, ಈ ಆಕ್ರೋಶ ಸರಿಯಾದುದೇ ಆಗಿದೆ’ ಎಂದಿದ್ದಾರೆ.
‘ಭಾರತ ತನ್ನ ಬತ್ತಳಿಕೆಯಲ್ಲಿನ ಎಲ್ಲಾ ಅಸ್ತ್ರಗಳನ್ನೂ ಪಾಕಿಸ್ಥಾನದ ಮೇಲೆ ಪ್ರಯೋಗಿಸಲಿದೆ, ಈ ಬಗ್ಗೆ ಮೋದಿಯವರು ಕಠಿಣ ನಿಲುವುಗಳನ್ನು ಹೊಂದಿದ್ದಾರೆ, ರಾಜತಾಂತ್ರಿಕವಾಗಿಯೇ ಇರಲಿ ಅಥವಾ ಬೇರೆ ವಿಧಾನದಲ್ಲೇ ಇರಲಿ ಪಾಕಿಸ್ಥಾನದ ವಿರುದ್ಧದ ನಿರ್ಣಾಯಕ ಯುದ್ಧವನ್ನು ಗೆಲ್ಲಲ್ಲು ಭಾರತ ಎಲ್ಲಾ ಮಾರ್ಗವನ್ನೂ ಅನುಸರಿಸಲಿದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.