ಚಂಡೀಗಢ: ಜಲಿಯಾನ್ ವಾಲಾಭಾಗ್ ನರಮೇಧದ ಶತಮಾನೋತ್ಸವದ ಸಮೀಪದಲ್ಲಿದ್ದೇವೆ, ಈ ನರಮೇಧವನ್ನು ನಡೆಸಿದ್ದಕ್ಕಾಗಿ ಯುಕೆ ಭಾರತದ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸುವ ನಿರ್ಣಯವೊಂದನ್ನು ಪಂಜಾಬ್ ವಿಧಾನಸಭೆ ಅಂಗೀಕರಿಸಿದೆ.
ನಿರ್ಣಯವನ್ನು ಅಲ್ಲಿನ ಸಂಸದೀಯ ವ್ಯವಹಾರ ಸಚಿವ ಬ್ರಹ್ಮ್ ಮೊಹಿಂದರ್ ಅವರು ವಿಧಾನಸಭೆಯಲ್ಲಿ ಮಂಡನೆಗೊಳಿಸಿದ್ದು, ಎಲ್ಲಾ ರಾಜಕೀಯ ಪಕ್ಷಗಳೂ ಇದಕ್ಕೆ ಸಮ್ಮತಿಯನ್ನು ನೀಡಿವೆ.
1919ರ ಎಪ್ರಿಲ್ 13ರಂದು ಅಮೃತಸರ ಜಲಿಯನ್ ವಾಲಾಭಾಗ್ಲ್ಲಿ ಬ್ರಿಟಿಷರು ನರಮೇಧ ನಡೆಸಿದ್ದು, ಅಪಾರ ಸಂಖ್ಯೆಯ ಭಾರತೀಯರು ಇದರಲ್ಲಿ ಪ್ರಾಣವನ್ನು ಕಳೆದುಕೊಂಡರು. ಇದು ಬ್ರಿಟಿಷ್ ಆಳ್ವಿಕೆಯ ಅತೀದೊಡ್ಡ ನೀಚ ಕೃತ್ಯ ಎಂದೇ ಇತಿಹಾಸದಲ್ಲಿ ಪರಿಗಣಿತವಾಗಿದೆ.
ಈ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಲು ಬ್ರಿಟನ್ಗೆ ಇರುವ ಏಕೈಕ ಮಾರ್ಗವೆಂದರೆ ಅದು ಅಧಿಕೃತ ಕ್ಷಮಾಪಣೆ ಎಂದು ನಿರ್ಣಯದಲ್ಲಿ ಪಂಜಾಬ್ ಹೇಳಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಹೆಜ್ಜೆಯನ್ನು ಮುಂದಿಡಬೇಕು ಎಂದು ಒತ್ತಾಯಿಸಿದೆ.
2019ರ ಎಪ್ರಿಲ್ 13ಕ್ಕೆ ಈ ಘಟನೆ ನಡೆದು ನೂರು ವರ್ಷಗಳಾಗಲಿವೆ. ಈ ನರಮೇಧಕ್ಕೆ ನೂರು ವರುಷವಾದರೂ ಭಾರತೀಯರ ಮನಸ್ಸಿನಲ್ಲಿ ಈ ಘಟನೆಯ ಕಹಿ ಇಂದಿಗೂ ಇದೆ. ಬ್ರಿಟಿಷ್ ಆಡಳಿತದ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ವೇಳೆ ಏಕಾಏಕಿ ಗುಂಡಿನ ಮಳೆಗರೆದು ಹತ್ಯೆ ಮಾಡಲಾಗಿತ್ತು. ಈ ಘಟನೆ ಇತರ ರಾಷ್ಟ್ರಪ್ರೇಮಿಗಳ ರಕ್ತವನ್ನು ಕುದಿಸಿತು, ಸ್ವಾತಂತ್ರ್ಯ ಚಳುವಳಿಕ ಬಳಿಕ ತೀವ್ರ ಸ್ವರೂಪವನ್ನು ಪಡೆದುಕೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.