ಸಿಯೋಲ್: ದಕ್ಷಿಣ ಕೊರಿಯಾದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು ಸಿಯೋಲ್ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಈ ಪುರಸ್ಕಾರವನ್ನು ಮೋದಿ ದೇಶಕ್ಕೆ ಸಮರ್ಪಣೆ ಮಾಡಿದ್ದಾರೆ ಹಾಗೂ ಅವಾರ್ಡ್ನ ಪೂರ್ಣ ಮೊತ್ತ ರೂ. 1,42,39,000 ನಮಾಮಿ ಗಂಗೆ ಯೋಜನೆಗೆ ಮೀಸಲು ಎಂದು ಪ್ರಧಾನಿ ಮೋದಿ ಅವರು ಘೋಷಿಸಿದ್ದಾರೆ.
ಅಂತಾರಾಷ್ಟ್ರೀಯ ಸಹಕಾರ, ಜಾಗತಿಕ ಪ್ರಗತಿ ಮತ್ತು ಮಾನವ ಅಭಿವೃದ್ಧಿಗೆ ಮೋದಿಯವರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ದಕ್ಷಿಣ ಕೊರಿಯಾ ಅವರಿಗೆ ಸಿಯೋಲ್ ಶಾಂತಿ ಪುರಸ್ಕಾರವನ್ನು ಪ್ರದಾನಿಸಿದೆ. ಈ ಗೌರವ ಪಡೆದ ಪ್ರಥಮ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರಾಗಿದ್ದಾರೆ.
ಈ ಪುರಸ್ಕಾರವನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಮೋದಿ, ‘ಈ ಪುರಸ್ಕಾರ ನನಗೊಬ್ಬನಿಗೆ ಸಿಕ್ಕಿದ್ದಲ್ಲ, ಭಾರತದ ಎಲ್ಲಾ ಜನರಿಗೆ ಸಿಕ್ಕಿದ್ದು. ಕಳೆದ ಐದು ವರ್ಷಗಳಲ್ಲಿ ಭಾರತಕ್ಕೆ ಯಶಸ್ಸು ಸಿಕ್ಕಿದ್ದು ಭಾರತೀಯರ ಆಶೋತ್ತರಗಳಿಂದ, ಪ್ರೇರಣೆಗಳಿಂದ ಮತ್ತು ಶ್ರಮಗಳಿಂದ. ಅವರ ಪರವಾಗಿ ನಾನು ಈ ಪುರಸ್ಕಾರವನ್ನು ಸ್ವೀಕರಿಸಿ, ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ’ ಎಂದಿದ್ದಾರೆ.
ಮಹಾತ್ಮ ಗಾಂಧೀಜಿಯವರು 150ನೇ ಜನ್ಮ ವರ್ಷಾಚರಣೆಯ ವೇಳೆಯಲ್ಲಿ ಈ ಪುರಸ್ಕಾರ ಸಿಕ್ಕಿರುವುದು ಅತೀವ ಸಂತಸವನ್ನು ತಂದಿದೆ ಎಂದಿದ್ದಾರೆ.
‘1998ರಲ್ಲಿ ಸಿಯೋಲ್ನಲ್ಲಿ ಯಶಸ್ವಿಯಾಗಿ ಜರುಗಿದ ಸಮ್ಮರ್ ಒಲಿಂಪಿಕ್ಸ್ನ ಸ್ಮರಣಾರ್ಥ ಸಿಯೋಲ್ ಪೀಸ್ ಫ್ರೈಝ್ನ್ನು ಆರಂಭಿಸಲಾಗಿದೆ, ಮಹಾತ್ಮ ಗಾಂಧಿ ಜನ್ಮದಿನದಂದು ಈ ಒಲಿಂಪಿಕ್ಸ್ ಅಂತ್ಯಗೊಂಡಿತ್ತು. ಈ ಒಲಿಂಪಿಕ್ಸ್ ಕೊರಿಯಾದ ಸಂಸ್ಕೃತಿ, ಆತಿಥ್ಯ ಮತ್ತು ಆರ್ಥಿಕತೆಯ ಯಶಸ್ಸುನ್ನು ಜಗತ್ತಿನ ಮುಂದೆ ತೆರೆದಿಟ್ಟಿತ್ತು’ ಎಂದು ಮೋದಿ ಹೇಳಿದ್ದಾರೆ.
The Seoul Peace Prize is dedicated to the people of India & our country’s culture of peace and harmony. https://t.co/ymUdug3JYp
— Narendra Modi (@narendramodi) February 22, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.