ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ನಿಯೋಜನೆಗೊಂಡಿರುವ ಯೋಧರು ಇನ್ನು ಮುಂದೆ ಕರ್ತವ್ಯಕ್ಕೆ ಹಾಜರಾಗುವ ವೇಳೆ ಅಥವಾ ರಜೆಗಾಗಿ ತೆರಳುವ ವೇಳೆ ವಾಯು ಮಾರ್ಗವನ್ನೇ ಬಳಸಲಿದ್ದಾರೆ. ಈ ನಿರ್ಧಾರವನ್ನು ಕೇಂದ್ರ ಗೃಹ ಇಲಾಖೆ ತೆಗೆದುಕೊಂಡಿದೆ.
ಜಮ್ಮು-ಶ್ರೀನಗರ, ಶ್ರೀನಗರ-ಜಮ್ಮು ಮತ್ತು ದೆಹಲಿ-ಶ್ರೀನಗರ, ಶ್ರೀನಗರ-ದೆಹಲಿ ವಿಮಾನ ಸೇವೆಗಳನ್ನು ಆರಂಭಿಸಲಾಗುತ್ತಿದೆ. ಈ ಬಗೆಗಿನ ನಿರ್ಧಾರಕ್ಕೆ ಇಂದು ಕೇಂದ್ರ ಗೃಹ ಇಲಾಖೆ ಅನುಮೋದನೆಯನ್ನು ನೀಡಿದೆ.
ಈ ನಿರ್ಧಾರದಿಂದ ಕೇಂದ್ರೀಯ ಶಸ್ತ್ರಾಸ್ತ್ರ ಪೊಲೀಸ್ ಪಡೆ(ಸಿಎಪಿಎಫ್)ನ ಕಾನ್ಸ್ಸ್ಟೇಬಲ್, ಹೆಡ್ ಕಾನ್ಸ್ಸ್ಟೇಬಲ್, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಆಫ್ ಪೊಲೀಸ್ ಇತ್ಯಾದಿ ರ್ಯಾಂಕುಗಳ ಸುಮಾರು 7.8 ಲಕ್ಷ ಯೋಧರಿಗೆ ಪ್ರಯೋಜನವಾಗಲಿದೆ. ರಜೆ ಮುಗಿದು ಕರ್ತವ್ಯಕ್ಕೆ ಹಾಜರಾಗಲು ಜಮ್ಮು ಕಾಶ್ಮೀರಕ್ಕೆ ತೆರಳುವವರಿಗೆ ಅಥವಾ ರಜೆ ಪಡೆದುಕೊಂಡು ಜಮ್ಮು ಕಾಶ್ಮೀರದಿಂದ ವಾಪಾಸ್ ಆಗುವ ಯೋಧರಿಗೆ ಸೇವೆ ಸಿಗಲಿದೆ.
ಈ ನಿರ್ಧಾರವನ್ನು ಈಗಾಗಲೇ ಸಿಎಸ್ಎಫ್, ಸಿಐಎಸ್ಎಫ್, ಐಟಿಬಿಪಿ, ಎಸ್ಎಸ್ಬಿಯ ಮುಖ್ಯಸ್ಥರುಗಳಿಗೆ ತಲುಪಿಸಲಾಗಿದೆ.
ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಲು ಬಸ್ನಲ್ಲಿ ತೆರಳುತ್ತಿದ್ದ ವೇಳೆ ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದನಾ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ದಾಳಿಯಿಂದಾಗಿ ಇನ್ನು ಮುಂದೆ ಯೋಧರನ್ನು ವಾಯು ಮಾರ್ಗದ ಮೂಲಕ ಪ್ರಯಾಣಿಸುವಂತೆ ಮಾಡಲು ನಿರ್ಧರಿಸಲಾಗಿದೆ.
In Jammu and Kashmir Sector, it may be recalled that Air Courier Service for CAPFs jawans was approved for the Jammu-Srinagar-Jammu sector.
Subsequently, the Service was extended to cover 1) Delhi-Jammu, 2) Jammu-Srinagar, 3) Srinagar-Jammu and 3) Jammu-Delhi sector in Dec 2017.— गृहमंत्री कार्यालय, HMO India (@HMOIndia) February 21, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.