ಬೆಂಗಳೂರು: ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿರು ‘ಏರೋ ಶೋ 2019’ನಲ್ಲಿ ಗುರುವಾರ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ದೇಶೀ ನಿರ್ಮಿತ ಲಘು ಯುದ್ಧವಿಮಾನ ತೇಜಸ್ನಲ್ಲಿ ಹಾರಾಟ ನಡೆಸಿದರು.
ಬಳಿಕ ಮಾತನಾಡಿದ ಅವರು, ‘ಲಘು ಯುದ್ಧವಿಮಾನ ತೇಜಸ್ನಲ್ಲಿ ಹಾರಾಡಿದ್ದು ಜೀವನಪರ್ಯಂತದ ಅನುಭವವನ್ನು ನೀಡಿದೆ. ನಾವು ಸಾಮಾನ್ಯ ಕುಶಲತೆಗಳನ್ನು ಪ್ರದರ್ಶಿಸುತ್ತಿದ್ದೇವೆ. ತೇಜಸ್ ತಂತ್ರಜ್ಞಾನ ಅತ್ಯುತ್ತಮವಾಗಿ, ಟಾರ್ಗೆಟ್ನ್ನು ಅತ್ಯುತ್ತಮವಾಗಿ ತಲುಪಿದೆ. ಇದು ಒಂದು ಅದ್ಭುತ ಯುದ್ಧವಿಮಾನ, ಇದು ನಮ್ಮ ವಾಯುಸಾಮರ್ಥ್ಯವನ್ನು ವೃದ್ಧಿಸಲಿದೆ’ ಎಂದಿದ್ದಾರೆ.
ತೇಜಸ್ನಲ್ಲಿ ಬಿಪಿನ್ ರಾವತ್ ಅವರು ಹಾರಾಟ ನಡೆಸಿದ್ದು ಇದೇ ಮೊದಲು. ಪೈಲೆಟ್ನ ಹಿಂಬಂದಿಯಲ್ಲಿರುವ ನಾವಿಗೇಟರ್ ಸೀಟಿನಲ್ಲಿ ಕುಳಿತು ಇವರು 40 ನಿಮಿಷಗಳ ಕಾಲ ಹಾರಾಟ ನಡೆಸಿದರು. ಅವರ ಬಳಿಕ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ವಿಜಯ್ ರಾಘವನ್ ಅವರು ತೇಜಸ್ನಲ್ಲಿ ಹಾರಾಟ ನಡೆಸಿದ್ದಾರೆ.
ನಿನ್ನೆಯಷ್ಟೇ ತೇಜಸ್ ಯುದ್ಧ ವಿಮಾನ, ಕಾರ್ಯಾಚರಣೆ ನಡೆಸಲು ಡಿಆರ್ಡಿಓದಿಂದ ಫೈನಲ್ ಆರಪೇಶನ್ ಕ್ಲಿಯರೆನ್ಸ್ನ್ನು ಪಡೆದುಕೊಂಡಿದೆ.
ಏರೋ ಶೋನಲ್ಲಿ ವಿವಿಧ ರೀತಿಯ ಯುದ್ಧ ವಿಮಾನಗಳು ಭಾಗವಹಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿವೆ. ವೀಕ್ಷಕರು ಬಾನಂಗಳಲ್ಲಿ ಉಕ್ಕಿನ ಹಕ್ಕಿಗಳ ಹಾರಾಟದ ಸೊಬಗನ್ನು ಕಂಡು ಪುಳಕಿತರಾಗುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.