ನವದೆಹಲಿ: ಹುತಾತ್ಮ ಯೋಧರ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದೊಂದಿಗೆ ಆರಂಭಗೊಂಡಿರುವ ‘ಭಾರತ್ ಕೆ ವೀರ್’ ಟ್ರಸ್ಟ್ಗೆ, ಪುಲ್ವಾಮ ದಾಳಿಯ ಬಳಿಕ ದಾಖಲೆಯ ಮಟ್ಟದಲ್ಲಿ ದೇಣಿಗೆಗಳು ಹರಿದು ಬಂದಿವೆ. ದಾಳಿ ನಡೆದ ಮೊದಲ ನಾಲ್ಕು ದಿನಗಳಲ್ಲಿ26.45 ಕೋಟಿ ರೂಪಾಯಿಗಳು ಸಂಗ್ರಹವಾಗಿವೆ.
ಇದೇ ಮೊದಲ ಬಾರಿಗೆ ಕಡಿಮೆ ಅವಧಿಯಲ್ಲಿ ‘ಭಾರತ್ ಕೆ ವೀರ್’ ಟ್ರಸ್ಟ್ನಲ್ಲಿ ಇಷ್ಟೊಂದು ಪ್ರಮಾಣದ ದೇಣಿಗೆ ಸಂಗ್ರಹವಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ 42 ಸಿಆರ್ಪಿಎಫ್ ಯೋಧರ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ಮಾಡುವ ಉದ್ದೇಶದೊಂದಿಗೆ ದೇಶದ ಜನರು ಇಷ್ಟೊಂದು ಮೊತ್ತವನ್ನು ದೇಣಿಗೆ ನೀಡಿದ್ದಾರೆ. ಗೃಹ ಸಚಿವಾಲಯ ಈ ಟ್ರಸ್ಟ್ನ್ನು ಮುನ್ನಡೆಸುತ್ತಿದೆ.
ಪ್ಯಾರಾಮಿಲಿಟರಿ ಸಿಬ್ಬಂದಿಗಳಿಗಾಗಿ ಈ ಟ್ರಸ್ಟ್ ಮೂಲಕ ಜನರು ರೂ. 15 ಲಕ್ಷದವರೆಗೆ ದೇಣಿಗೆಯನ್ನು ನೀಡಬಹುದಾಗಿದೆ, ಅದಕ್ಕಿಂತ ಹೆಚ್ಚು ಹಣವನ್ನು ನೀಡಿದರೆ ಅದನ್ನು ಸಿಎಪಿಎಫ್ ಕೋರ್ಪಸ್ ಫಂಡ್ಗೆ ಸೇರಿಸಲಾಗುತ್ತದೆ.
ಪುಲ್ವಾಮ ದಾಳಿ ನಡೆದ ಒಂದೇ ದಿನದಲ್ಲಿ ಪ್ರತಿ ಹುತಾತ್ಮರ ಕುಟುಂಬಗಳಿಗೆ ತಲಾ 15 ಲಕ್ಷ ರೂಪಾಯಿ ಹಂಚಿಕೆ ಮಾಡುವಷ್ಟು ಹಣ ಭಾರತ್ ಕೆ ವೀರ್ನಲ್ಲಿ ಸಂಗ್ರಹವಾಗಿದೆ. ಭಾರತೀಯರು ಸೈನಿಕರಿಗೆ ಸಹಾಯ ಮಾಡಲು ಇಷ್ಟೊಂದು ಉತ್ಸುಕತೆ ತೋರಿಸುತ್ತಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಸಂಗ್ರಹವಾದ ಹಣದಲ್ಲಿ ಒಂದಿಷ್ಟು ಮೊತ್ತವನ್ನು 40 ಹುತಾತ್ಮರ ಕುಟುಂಬಗಳಿಗೆ ಹಂಚಿಕೆ ಮಾಡಲಾಗುತ್ತದೆ, ಉಳಿದ ಹಣವನ್ನು ನಮ್ಮ ಸೈನಿಕರಿಗಾಗಿ ಉಳಿಸಿಕೊಳ್ಳಲಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.