ಇಸ್ಲಾಮಾಬಾದ್: ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ಥಾನ ಸೇನೆ ಕೈಗೊಂಬೆಯಾಗಿದ್ದಾರೆ, ಸೇನೆಯಿಂದ ಆದೇಶವನ್ನು ಪಡೆದುಕೊಂಡ ಬಳಿಕವೇ ಅವರು ಪುಲ್ವಾಮ ದಾಳಿಯ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ ಎಂದು ಇಮ್ರಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಆರೋಪಿಸಿದ್ದಾರೆ.
‘ಇಮ್ರಾನ್ ಖಾನ್ ಅವರು ತಮ್ಮ ಸಿದ್ಧಾಂತ ಹಾಗೂ ಪ್ರಗತಿಪರ ಚಿಂತನೆಯೊಂದಿಗೆ ರಾಜಿ ಮಾಡಿಕೊಂಡ ಬಳಿಕವೇ ಅಧಿಕಾರಕ್ಕೆ ಬಂದಿದ್ದಾರೆ. ದೇಶ ಏನು ಬಯಸುತ್ತಿದೆ ಎಂದು ಹೇಳುದಕ್ಕೂ ಅವರಿಗೆ ಸೇನೆಯಿಂದ ಆದೇಶ ಬರಬೇಕು. ಚುನಾವಣೆಯ ಸಂದರ್ಭ ನಾವು ಹೊಸ ಧಾರ್ಮಿಕ ತೀವ್ರಗಾಮಿ ಪಕ್ಷದ ಉದಯವನ್ನು ನೋಡಿದ್ದೇವೆ ಮತ್ತು ಇಸ್ಲಾಮಾಬಾದ್ನಲ್ಲಿ ಸಾಕಷ್ಟು ಹಿಂಸೆ, ದೊಂಬಿಗಳನ್ನೂ ನೋಡಿದ್ದೇವೆ. ಇಮ್ರಾನ್ ಖಾನ್ ಅವರು ಧಾರ್ಮಿಕ ನಿಂದನೆಯ ಕಾರ್ಡ್ ಬಳಸುತ್ತಿದ್ದಾರೆ’ ಎಂದು ರೆಹಮ್ ತಮ್ಮ ಮಾಜಿ ಪತಿಯ ವಿರುದ್ಧ ಕಿಡಿಕಾರಿದ್ದಾರೆ.
ಭಾರತ ಯುದ್ಧ ಘೋಷಿಸಿದರೆ ನಾವು ಪ್ರತಿ ದಾಳಿ ಮಾಡುತ್ತೇವೆ ಎಂದು ಇಮ್ರಾನ್ ಖಾನ್ ಮಾಧ್ಯಮಗಳ ಮುಂದೆ ಹೇಳಿದ್ದರು.
ಈ ಬಗ್ಗೆ ಹೇಳಿರುವ ರೆಹಮ್, ‘ಇಮ್ರಾನ್ ಖಾನ್ ಅವರಿಗೆ ಏನು ಹೇಳಿಕೊಡಲಾಗಿತ್ತೋ ಅದನ್ನು ಹೇಳಿದ್ದಾರೆ. ನಾವೂ ಕ್ರಮ ಜರುಗಿಸುತ್ತೇವೆ ಎಂದು ಅವರು ಹೇಳುತ್ತಾರಾದರೆ, ಅವರು ಮೊದಲು ನಮಗೆ ಒಂದಿಷ್ಟು ವಿಷಯಗಳ ವಿವರಣೆ ನೀಡಬೇಕು. ಫಿನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ ಪುಲ್ವಾಮ ದಾಳಿಗೂ ಮುಂಚಿತವಾಗಿಯೇ ನಮ್ಮನ್ನು ಬ್ಲಾಕ್ಲಿಸ್ಟ್ ಮಾಡುವ ಹಾದಿಯಲ್ಲಿತ್ತು’ ಎಂದಿದ್ದಾರೆ.
‘ಜೈಶೇ ಮೊಹಮ್ಮದ್ ಸಂಘಟನೆಯ ಜೊತೆ ಪಾಕಿಸ್ಥಾನ ಕೈಜೋಡಿಸದೆ ಇರಬಹುದು, ಆದರೆ ಆ ಸಂಘಟನೆಯನ್ನು ಹತ್ತಿಕ್ಕಿದ ಯಾವುದೇ ಟ್ರ್ಯಾಕ್ ರೆಕಾರ್ಡ್ನ್ನು ನಾವು ಹೊಂದಿಲ್ಲ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.