ನವದೆಹಲಿ: ಭಾರತದ ಸೆಮಿ ಹೈ ಸ್ಪೀಡ್ ರೈಲು ‘ವಂದೇ ಭಾರತ್ ಎಕ್ಸ್ಪ್ರೆಸ್’ ಬಗ್ಗೆ ವ್ಯಂಗ್ಯವಾಡಿದ್ದ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದು, ಪ್ರತಿಪಕ್ಷಗಳ ವ್ಯಂಗ್ಯ ಎಂಜಿನಿಯರ್ಗಳಿಗೆ ಮತ್ತು ಟೆಕ್ನೀಶಿಯನ್ಗಳಿಗೆ ಮಾಡಿದ ಮಹಾ ಅವಮಾನ ಎಂದು ಆರೋಪಿಸಿದ್ದಾರೆ.
‘ವಂದೇ ಭಾರತ್ ಎಕ್ಸ್ಪ್ರೆಸ್’ ಮೊದಲ ಸಂಚಾರದಲ್ಲಿ ತುಸು ತಾಂತ್ರಿಕ ದೋಷಕ್ಕೆ ಒಳಪಟ್ಟಿತ್ತು. ಇದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದರು.
ಈ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿರುವ ಮೋದಿ, ‘ಕೆಲವರು ಸೆಮಿ ಹೈ ಸ್ಪೀಡ್ ರೈಲನ್ನು ಟಾರ್ಗೆಟ್ ಮಾಡಿ ವ್ಯಂಗ್ಯ ಮಾಡುತ್ತಿರುವುದು ದುರಾದೃಷ್ಟಕರ. ಇದು ಎಂಜಿನಿಯರ್ ಮತ್ತು ಟೆಕ್ನಿಶಿಯನ್ಗಳಿಗೆ ಮಾಡಿದ ಅವಮಾನ. ಇವರಿಗೆ ಅವಮಾನ ಮಾಡುವ ಮೂಲಕ ದೇಶವನ್ನೇ ಅವಮಾನ ಮಾಡಿದ್ದಾರೆ. ಇಂತಹವರ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ಸರಿಯಾದ ಸಂದರ್ಭದಲ್ಲಿ ಅವರಿಗೆ ಸರಿಯಾದ ಶಿಕ್ಷೆಯನ್ನು ನೀಡಬೇಕು’ ಎಂದಿದ್ದಾರೆ.
‘ಸದಾ ನಕರಾತ್ಮಕತೆಯನ್ನೇ ಒಳಗೊಂಡಿರುವ ಜನರಿಂದ ನಾಗರಿಕರು ನೈತಿಕ ಸ್ಥೈರ್ಯವನ್ನು ಕಳೆದುಕೊಳ್ಳಬಾರದು’ ಎಂದು ಮೋದಿ ಕರೆ ನೀಡಿದ್ದಾರೆ.
’ನಾನು ನಮ್ಮ ಎಂಜಿನಿಯರಿಂಗ್ ವೃತ್ತಿಪರರಿಗೆ ಸೆಲ್ಯೂಟ್ ಮಾಡುತ್ತೇನೆ, ಭವಿಷ್ಯದಲ್ಲಿ ನಮ್ಮ ದೇಶಕ್ಕೆ ಬುಲೆಟ್ ಟ್ರೈನ್ ನಿರ್ಮಿಸಿಕೊಡುವವರು ಮತ್ತು ಅದನ್ನು ಓಡಿಸುವವರು ಅವರು. ಕೆಲವರ ವ್ಯಂಗ್ಯದಿಂದ ನೋವು ಅನುಭವಿಸಿದವರು ನನಗೆ ಪತ್ರೆ ಬರೆಯುತ್ತಿದ್ದಾರೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.