ಹಂಪಿ: ವಿಶ್ವವಿಖ್ಯಾತ ಹಂಪಿಯಲ್ಲಿನ ಕಂಬಗಳನ್ನು ಹಾನಿಗೊಳಪಡಿಸಿದ್ದ ದುಷ್ಕರ್ಮಿಗಳಿಗೆ ತಕ್ಕ ಶಾಸ್ತಿಯಾಗಿದೆ. ಕಲ್ಲನ್ನು ಮರುಸ್ಥಾಪನೆ ಮಾಡುವ ಕೆಲಸವನ್ನು ಇವರಿಂದಲೇ ಮಾಡಿಸಲಾಗಿದ್ದು, 70 ಸಾವಿರ ರೂಪಾಯಿಗಳ ದಂಡವನ್ನೂ ಇವರಿಗೆ ವಿಧಿಸಲಾಗಿದೆ.
ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಹಂಪಿಯ ಅತ್ಯಮೂಲ್ಯ ಕಲ್ಲಿನ ಕಂಬವನ್ನು ನೆಲಕ್ಕುರುಳಿಸಿ ಅದರ ವೀಡಿಯೋವನ್ನೂ ಚಿತ್ರೀಕರಣ ಮಾಡಲಾಗಿತ್ತು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿ, ಪ್ರತಿಭಟನೆಗಳೂ ನಡೆದಿದ್ದವು.
ದುಷ್ಕರ್ಮಿಗಳ ಪೈಕಿ ಮೂರು ಮಂದಿ ಕಂಬ ಕೆಡುವಿದರೆ, ಇನ್ನೊಬ್ಬ ಕೂತು ವೀಡಿಯೋ ಮಾಡಿದ್ದ. ಇವರ ಈ ಕೃತ್ಯವನ್ನು ಕರ್ನಾಟಕದ ಜನರು ಖಂಡಿಸಿದ್ದರು. ಬಳಿಕ ಇವರನ್ನು ಈ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಇವರನ್ನು ಹಂಪಿಗೆ ಕರೆದುಕೊಂಡು ಹೋಗಲಾಗಿದ್ದು, ಪುರಾತತ್ವ ಇಲಾಖೆಯ ಅಧಿಕಾರಿಗಳ ಮುಂದೆ ಕಂಬವನ್ನು ಇವರಿಂದಲೇ ಮರು ನಿರ್ಮಿಸುವಂತೆ ಮಾಡಲಾಗಿದೆ. ಅಲ್ಲದೇ, 70 ಸಾವಿರ ರೂಪಾಯಿಗಳ ದಂಡವನ್ನು ಇವರಿಗೆ ವಿಧಿಸಲಾಗಿದೆ.
ಹಂಪಿ ಉತ್ತರ ಕರ್ನಾಟಕದ ಸಣ್ಣ ನಗರವಾಗಿದ್ದು, ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇದನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣ ಎಂದು ಘೋಷಣೆ ಮಾಡಲಾಗಿದೆ. ಇಲ್ಲಿನ ದೇಗುಲಗಳು, ಕಲ್ಲಿನ ಕೆತ್ತನೆಗಳು ದೇಶ ವಿದೇಶಗಳ ಜನರನ್ನು ಆಕರ್ಷಿಸುತ್ತಿದೆ. ನ್ಯೂಯಾರ್ಕ್ ಟೈಮ್ಸ್ನ, ವಿಶ್ವದ 52 ನೋಡಲೇ ಬೇಕಾದ ತಾಣಗಳಲ್ಲಿ ಇದು ಎರಡನೇ ಸ್ಥಾನವನ್ನೂ ಪಡೆದುಕೊಂಡಿದೆ.
ಸೂಕ್ತವಾದ ಭದ್ರತೆಗಳನ್ನು ಇಲ್ಲಿ ಕಲ್ಪಿಸಿದ ಕಾರಣದಿಂದಾಗಿ, ದುಷ್ಕರ್ಮಿಗಳು ಪ್ರಾಚೀನ ಸ್ಮಾರಕಕ್ಕೆ ಹಾನಿಯುಂಟು ಮಾಡುವಂತಹ ಸಾಹಸವನ್ನು ಮಾಡುತ್ತಿದ್ದಾರೆ. ಇನ್ನು ಮುಂದೆಯಾದರೂ ಸರ್ಕಾರ ಎಚ್ಚೆತ್ತು ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಅಗತ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.