ಸಿಂಗಾಪುರ: ಎರಡು ದಿನಗಳ ಸಿಂಗಾಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು, ಗುರುವಾರ ‘ಇಂಡೋ-ಸಿಂಗಾಪುರ ಹ್ಯಾಕಥಾನ್’ ವಿಜೇತರನ್ನು ಭೇಟಿಯಾಗಿ, ಅವರಿಗೆ ಪ್ರಶಸ್ತಿಯನ್ನು ಪ್ರದಾನಿಸಿದರು.
ಭಾರತದ ಐಐಟಿ ಖರಗ್ಪುರ್, ಐಐಟಿ ಟ್ರಿಚಿ, ಎಂಐಟಿ ಕಾಲೇಜ್ ಆಫ್ ಎಂಜಿನಿಯರಿಂಗ್-ಪುಣೆ ಭಾರತದ ವಿಜೇತ ತಂಡಗಳಾಗಿವೆ. ಎನ್ಟಿಯು, ಎಸ್ಯುಟಿಡಿ ಸಿಂಗಾಪುರದ ವಿಜೇತ ತಂಡಗಳಾಗಿವೆ.
ಭಾರತ ಮತ್ತು ಸಿಂಗಾಪುರದ ತಲಾ 3 ವಿಜೇತ ತಂಡಗಳಿಗೆ ಪ್ರಶಸ್ತಿ ಸಿಗಲಿದೆ. ಪ್ರಥಮ ವಿಜೇತರಿಗೆ ಎಸ್ಜಿಡಿ 10,000, ದ್ವಿತೀಯ ವಿಜೇತರಿಗೆ ಎಸ್ಜಿಡಿ 6,000, ತೃತೀಯ ವಿಜೇತರಿಗೆ ಎಸ್ಜಿಡಿ 4 ಸಾವಿರಗಳನ್ನು ನೀಡಲಾಗಿದೆ.
ಯುವ ಜನತೆಗೆ ತಮ್ಮ ಕೌಶಲ್ಯ ಮತ್ತು ಇನ್ನೋವೇಶನ್ಗಳನ್ನು ಪ್ರದರ್ಶಿಸಲು ಅವಕಾಶವನ್ನು ಕಲ್ಪಿಸಿಕೊಡುವ ಸಲುವಾಗಿ ’ಇಂಡೋ-ಸಿಂಗಾಪುರ ಹ್ಯಾಕಥಾನ್’ ಆಯೋಜನೆಗೊಳಿಸಲಾಗಿತ್ತು.
source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.