ಕೊಲಂಬೋ: ಶ್ರೀಲಂಕಾದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದಿದ್ದು, ಶುಕ್ರವಾರ ನೂತನ ಪ್ರಧಾನಿಯಾಗಿ ಮಹೇಂದ್ರ ರಾಜಪಕ್ಷೆಯವರ ನೇಮಕವಾಗಿದೆ.
ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ರನಿಲ್ ವಿಕ್ರಮಸಿಂಘೆ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿ, ರಾಜಪಕ್ಷೆಗೆ ಪ್ರಧಾನಿ ಪಟ್ಟ ಕಟ್ಟಿದ್ದಾರೆ.
ರಾಜಪಕ್ಷೆಯವರ ಪ್ರಮಾಣವಚನ ಸ್ವೀಕಾರವೂ ಅತ್ಯಂತ ತರಾತುರಿಯಲ್ಲಿ ಜರುಗಿದ್ದು, ಇದರ ದೃಶ್ಯಾವಳಿಗಳನ್ನು ರಾಜಪಕ್ಷೆಗೆ ನಿಷ್ಠವಾಗಿರುವ ಟಿವಿ ಚಾನೆಲ್ವೊಂದು ಪ್ರಸಾರ ಮಾಡಿದೆ. ಆದರೆ ಪ್ರಮಾಣವಚನದ ಸಿಂಧುತ್ವ ಇನ್ನೂ ಅನಿಶ್ಚಿತವಾಗಿದೆ.
ರನಿಲ್ ಅವರ ಯುಎನ್ಪಿ ಪಕ್ಷದೊಂದಿಗಿನ ಮೈತ್ರಿಯನ್ನು ಸಿರಿಸೇನಾ ಅವರ ರಾಜಕೀಯ ಮೈತ್ರಿಕೂಟ ಯುಪಿಎಫ್ಎ ತೊರೆದ ಬಗ್ಗೆ ಘೋಷಣೆಯಾದ ಬೆನ್ನಲ್ಲಿ ಈ ರಾಜಕೀಯ ಬೆಳವಣಿಗೆಗಳು ಜರುಗಿವೆ.
2015ರಲ್ಲಿ ರನಿಲ್ ಬೆಂಬಲದೊಂದಿಗೆ ಸಿರಿಸೇನಾ ಅವರು ಶ್ರೀಲಂಕಾದ ಅಧ್ಯಕ್ಷರಾಗಿ ಆಯ್ಕೆಯಾದರು. ಈ ಮೂಲಕ ದಶಕಗಳ ರಾಜಪಕ್ಷೆ ಆಡಳಿತವನ್ನು ಕೊನೆಗಾಣಿಸಿದ್ದರು. ಇದೀಗ ಮತ್ತೆ ಬಿಕ್ಕಟ್ಟು ಉದ್ಭವಿಸಿ ರಾಜಪಕ್ಷೆ ಪ್ರಧಾನಿಯಾಗಿದ್ದಾರೆ.
source: timesnownews.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.