ಇರಾಕ್ ಮೇಲೆ ಯುಎಸ್ ವಿಧಿಸಿರುವ ದಿಗ್ಭಂಧನದಿಂದಾಗಿ ಭಾರತಕ್ಕೆ ತಲೆದೋರಬಹುದಾದ ತೈಲದ ಅಭಾವವನ್ನು ನೀಗಿಸಲು ನಾವು ಬದ್ಧರಾಗಿದ್ದೇವೆ ಎಂದು ಇಂಡಿಯಾ ಎನರ್ಜಿ ಫೋರಂನಲ್ಲಿ ಸೌದಿ ಅರೇಬಿಯಾದ ತೈಲ ಸಚಿವ ಖಲೀದ್ ಅಲ್ ಫಲೀಹ್ ಭರವಸೆಯಿತ್ತಿದ್ದಾರೆ.
ನವದೆಹಲಿ: ಭಾರತದ ಏರುತ್ತಿರುವ ತೈಲ ಬೇಡಿಕೆಗಳನ್ನು ಪೂರೈಸಲು ತಾನು ಬದ್ಧವಾಗಿದ್ದೇನೆ ಎಂದು ಸೌದಿ ಅರೇಬಿಯಾ ಹೇಳಿದೆ. ಅಲ್ಲದೇ ವಿಶ್ವದ ಅತೀ ವೇಗವಾಗಿ ಬೆಳೆಯುತ್ತಿರುವ ಇಂಧನ ಗ್ರಾಹಕ ಭಾರತದ ತೈಲ ವ್ಯಾಪಾರ ಮತ್ತು ಪೆಟ್ರೋಕೆಮಿಕಲ್ ಬ್ಯುಸಿನೆಸ್ನಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವುದಾಗಿ ಸೌದಿ ಹೇಳಿಕೊಂಡಿದೆ.
ಇಂಡಿಯಾ ಎನರ್ಜಿ ಫೋರಂನ್ನು ಉದ್ದೇಶಿಸಿ ಮಾತನಾಡಿದ ಸೌದಿ ತೈಲ ಸಚಿವ ಖಲೀದ್ ಅಲ್ ಪಲೀಹ್ ಅವರು, ಭಾರತದಲ್ಲಿ ಸುಲಲಿತ ವ್ಯವಹಾರಕ್ಕೆ ಅನುವು ಮಾಡಿಕೊಟ್ಟ ಮತ್ತು ಅಚ್ಛೇದಿನ್ ತಂದುಕೊಟ್ಟ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಮಹತ್ವದ ಇಂಧನ ಮತ್ತು ಜಾಗತಿಕ ತಂತ್ರಗಾರಿಕ ಪಾಲುದಾರನಾಗಿ ಭಾರತಕ್ಕೆ ಸೌದಿ ಅತೀಹೆಚ್ಚಿನ ಮಹತ್ವವನ್ನು ನೀಡಿದೆ ಎಂಬುದಕ್ಕೆ ನಾನು ಪದೇ ಪದೇ ಭಾರತಕ್ಕೆ ಆಗಮಿಸುತ್ತಿರುವುದೇ ಸಾಕ್ಷಿ ಎಂದು ಅವರು ಹೇಳಿದ್ದಾರೆ.
ಇರಾಕ್ನ ಮೇಲೆ ಅಮೆರಿಕಾ ವಿಧಿಸಿರುವ ದಿಗ್ಭಂಧನದಿಂದ ಭಾರತಕ್ಕೆ ತೈಲ ಕೊರತೆಯಾದರೆ ಅದನ್ನು ಪೂರೈಸಲು ನಾವು ಬದ್ಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇರಾಕ್ನ ನಂತರ ಭಾರತಕ್ಕೆ ಅತೀಹೆಚ್ಚು ಇಂಧನ ಪೂರೈಸುತ್ತಿರುವ ರಾಷ್ಟ್ರ ಸೌದಿ.
source; NEWS24
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.