ಲಕ್ನೋ: ಐತಿಹಾಸಿಕವಾಗಿ ಮಹತ್ವದ ನಗರವಾದ ಉತ್ತರಪ್ರದೇಶದ ಅಲಹಾಬಾದ್ ಶೀಘ್ರದಲ್ಲೇ ಪ್ರಯಾಗ್ ರಾಜ್ ಆಗಿ ಬದಲಾಗುವ ಸಾಧ್ಯತೆ ಇದೆ.
ಬಹುತೇಕ ಮಂದಿ ಒಪ್ಪಿಗೆ ಸೂಚಿಸಿದರೆ ಶೀಘ್ರದಲ್ಲೇ ಅಲಹಾಬಾದ್ಗೆ ಪ್ರಯಾಗ್ ರಾಜ್ ಆಗಿ ಮರುನಾಮಕರಣ ಮಾಡುವುದಾಗಿ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರು ಹೇಳಿದ್ದಾರೆ.
‘ಅಲಹಾಬಾದ್ಗೆ ಪ್ರಯಾಗ್ ರಾಜ್ ಎಂದು ಹೆಸರಿಡುವುದು ಬಹುತೇಕರ ಒತ್ತಾಯವಾಗಿದೆ. ನನಗನಿಸುವ ಪ್ರಕಾರ ಇದು ಒಳ್ಳೆಯ ಸಂದೇಶವನ್ನೂ ನೀಡುತ್ತದೆ. ಎಲ್ಲರು ಒಪ್ಪಿದರೆ, ಪ್ರಯಾಗ್ ರಾಜ್ ಹೆಸರಿಡುತ್ತೇವೆ. ಇದು ಒಳ್ಳೆಯ ಆರಂಭವೂ ಆಗುತ್ತದೆ’ ಎಂದಿದ್ದಾರೆ.
ಮೂಲಗಳ ಪ್ರಕಾರ, 2019ರ ಕುಂಭಮೇಳದ ಬ್ಯಾನರ್ಗಳಲ್ಲಿ ಅಲಹಾಬಾದ್ ಬದಲು ಪ್ರಯಾಗ್ ರಾಜ್ ಎಂದು ಉಲ್ಲೇಖಿಸಲಾಗುತ್ತದೆ ಎನ್ನಲಾಗಿದೆ.
2019ರ ಜನವರಿ 15ರಿಂದ ಕುಂಭಮೇಳ ಜರುಗಲಿದೆ.
source; ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.