ನವದೆಹಲಿ: ದೇಶದ ವಿವಿಧ ವಲಯದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನವನ್ನು ಉತ್ತೇಜಿಸುವುದಕ್ಕಾಗಿ ನೀತಿ ಆಯೋಗ, ಮೈಕ್ರೋಸಾಫ್ಟ್ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.
ಕೃಷಿ, ಆರೋಗ್ಯ, ಸುಸ್ಥಿರ ಪರಿಸರ, ನೈಸರ್ಗಿಕ ಭಾಷಾ ಕಾಂಪ್ಯೂಟಿಂಗ್ ಇತ್ಯಾದಿ ವಲಯಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಲು ನೀತಿ ಆಯೋಗ ಉತ್ಸುಹುಕವಾಗಿದ್ದು, ಇದಕ್ಕಾಗಿ ಮೈಕ್ರೋಸಾಫ್ಟ್ನೊಂದಿಗೆ ಪಾಲುದಾರಿಕೆಗೆ ಒಳಪಟ್ಟಿದೆ.
ಅಷ್ಟೇ ಅಲ್ಲದೇ ಹೊಸ ಯೋಜನೆ ಮತ್ತು ಪರಿಹಾರಗಳಿಗಾಗಿ ಕ್ಲೌಡ್, ಕೃತಬುದ್ಧಿಮತ್ತೆ, ಸಂಶೋಧನೆ ಮತ್ತದರ ತಜ್ಞತೆಯನ್ನು ಒಟ್ಟು ಸೇರಿಸಲು ನೀತಿ ಆಯೋಗಕ್ಕೆ ಮೈಕ್ರೋಸಾಫ್ಟ್ ಸಹಾಯ ಮಾಡಲಿದೆ.
ಅಭಿವೃದ್ಧಿಗಾಗಿ ಮತ್ತು ಸ್ಥಳಿಯ ಭಾಷಾ ಕಾಂಪ್ಯೂಟಿಂಗ್ನ್ನು ಅಳವಡಿಸಲು ಮೈಕ್ರೋಸಾಫ್ಟ್ ಕೃತಕ ಬುದ್ಧಿಮತ್ತೆ ಬಳಕೆಯನ್ನು ತ್ವರಿತಗೊಳಿಸಲಿದೆ.
‘ನಮ್ಮ ದೇಶದ ಕೃಷಿ, ಆರೋಗ್ಯ, ಪರಿಸರ, ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯನ್ನು ತರುವುದು ಅಗತ್ಯವಾಗಿದ್ದು, ದೇಶದ ಅಂತರ್ಗತ ಅಭಿವೃದ್ಧಿಗೆ ಇದು ಮುಖ್ಯವಾಗಿದೆ’ ಎಂದು ನೀತಿ ಆಯೋಗ ಪ್ರಕಟನೆಯಲ್ಲಿ ತಿಳಿಸಿದೆ.
source; NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.