ಹಿಸ್ಸಾರ್: ಕಷ್ಟಪಟ್ಟು ಪೈಲೆಟ್ ಆದ ಹರಿಯಾಣದ ಯುವಕನೊಬ್ಬ ತನ್ನ ಹುಟ್ಟೂರಿಗೆ ಆಗಮಿಸಿ ಅಲ್ಲಿನ 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯರನ್ನು ವಿಮಾನದ ಮೂಲಕ ಪ್ರವಾಸ ಕರೆದುಕೊಂಡು ಹೋಗಿದ್ದಾರೆ. ಈ ಮೂಲಕ ಇತರ ಯುವಕರಿಗೆ ಮಾದರಿ ಎನಿಸಿದ್ದಾರೆ.
ಹರಿಯಾಣದ ಹಿಸ್ಸಾರ್ನ ವಿಕಾಸ್ ಜಯಾನಿ ಎಂಬ ಯುವಕ ಪೈಲೆಟ್ ಆದ ಬಳಿಕ ತನ್ನ ಹುಟ್ಟೂರಿಗೆ ಆಗಮಿಸಿ, ಅಲ್ಲಿನ ಹಿರಿಯರಿಗೆ ವಿಮಾನದ ಟಿಕೆಟ್ ಬುಕ್ ಮಾಡಿಸಿ ಅಮೃತಸರಕ್ಕೆ ಪ್ರಯಾಣಿಸುವಂತೆ ಮಾಡಿದ್ದಾರೆ.
ವಿಕಾಸ್ ಅವರಿಂದಾಗಿ ಹಿರಿಯರು ಸ್ವರ್ಣಮಂದಿರ, ವಾಘಾ ಗಡಿ, ಜಲಿಯನ್ವಾಲಾ ಭಾಗ್ನ್ನು ವೀಕ್ಷಣೆ ಮಾಡಿದ್ದಾರೆ. 90 ವರ್ಷದ ಬಿಮ್ಲಾ, 80 ವರ್ಷದ ಅಮರ್ ಸಿಂಗ್, 78 ವರ್ಷದ ರಾಮಮುತಿ, ಕಂಕಾರಿ, 75 ವರ್ಷದ ಗಿರಿದವರಿದೇವಿ ಸೇರಿದಂತೆ ಅನೇಕರು ಈ ಹಿರಿಯರ ತಂಡದಲ್ಲಿದ್ದರು. ಇದು ಇವರ ಮೊತ್ತ ಮೊದಲ ವಿಮಾನ ಹಾರಾಟವಾಗಿತ್ತು.
ಹಿರಿಯರನ್ನು ಯಾವ ರೀತಿ ಆದರಿಸಬೇಕು, ಗೌರವಿಸಬೇಕು ಎಂಬುದನ್ನು ಯುವಕರಿಗೆ ತೋರಿಸಿಕೊಟ್ಟಿದ್ದಾರೆ ವಿಕಾಸ್ ಜಯಾನಿ.
source; Timesnownews.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.