ಮುಂಬಯಿ: ಬ್ರ್ಯಾಂಡೆಡ್ ಮೆಡಿಸಿನ್ಗಳಿಗೆ ಬದಲಾಗಿ ಜನರಿಕ್ ಔಷಧಿಗಳನ್ನು ಬಳಸುತ್ತಿರುವ ಮೊತ್ತ ಮೊದಲ ಆಸ್ಪತ್ರೆಯಾಗಿ ಮುಂಬಯಿಯ ಎಚ್.ಜೆ ದೋಶಿ ಘಾಟ್ಕೋಪರ್ ಹಿಂದೂ ಸಭಾ ಹಾಸ್ಪಿಟಲ್ ಹೊರಹೊಮ್ಮಿದೆ. ಇದರಿಂದಾಗಿ ಇಲ್ಲಿಗೆ ಆಗಮಿಸುವ ರೋಗಿಗಳ ಔಷಧಿ ವೆಚ್ಚದಲ್ಲಿ ಅತ್ಯಧಿಕ ಪ್ರಮಾಣದ ಕಡಿತವಾಗಿದೆ.
ಅತೀ ಹೆಚ್ಚು ಸಂಖ್ಯೆಯಲ್ಲಿ ಆಗಮಿಸುವ ಬಡ ರೋಗಿಗಳಿಗೆ ಆಸ್ಪತ್ರೆಯ ಬಿಲ್, ಔಷಧಿಗಳ ವೆಚ್ಚವನ್ನು ಭರಿಸುವುದು ತೀರಾ ಕಷ್ಟಕರವಾಗುತ್ತದೆ. ಆದರೆ ಹಿಂದೂಸಭಾ ಆಸ್ಪತ್ರೆ ಕೈಗೊಂಡ ನಿರ್ಧಾರದಿಂದಾಗಿ ಈಗ ಔಷಧಿಗಳ ಬಿಲ್ನಲ್ಲಿ ಭಾರೀ ಪ್ರಮಾಣದ ಕಡಿತವಾಗುತ್ತಿದೆ.
ಹಿಂದೂಸಭಾ ಚಾರಿಟೇಬಲ್ ಆಸ್ಪತ್ರೆಯಾಗಿದ್ದು, 2018ರ ಆಗಸ್ಟ್ನಿಂದ ಬ್ರ್ಯಾಂಡೆಡ್ ಔಷಧಿಗಳನ್ನು ತೊರೆದು, ಜನರಿಕ್ ಔಷಧಿಯತ್ತ ಇದು ಮುಖ ಮಾಡಿದೆ.
2016ರಲ್ಲೇ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ, ಜನರಿಕ್ ಮೆಡಿಸಿನ್ಗಳನ್ನು ರೋಗಿಗಳಿಗೆ ಸೂಚಿಸುವಂತೆ ವೈದ್ಯರಿಗೆ ನಿರ್ದೇಶನ ನೀಡಿತ್ತು. ಆದರೂ ವೈದ್ಯರುಗಳು ಇದರತ್ತ ಹೆಚ್ಚಿನ ಗಮನಕೊಟ್ಟಂತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.