ಜೈಪುರ: ದೇಶದಾದ್ಯಂತದ ರೈಲು ನಿಲ್ದಾಣಗಳು ಸ್ವಚ್ಛ ಹಾಗೂ ಸುಂದರವಾಗುವತ್ತ ದಾಪುಗಾಲಿಡುತ್ತಿದೆ. ಇದೇ ರೀತಿ, ಜೈಪುರದ ವಿಮಾನನಿಲ್ದಾಣವನ್ನು ಸುಂದರೀಕರಣಗೊಳಿಸುವ ಸಲುವಾಗಿ ಸುಮಾರು 350 ನಾಗರಿಕರು ಒಗ್ಗಟ್ಟಾಗಿದ್ದಾರೆ.
ಟೀಮ್ ಕಾಂಟ್ರಿ ಹೆಸರಲ್ಲಿ 250 ಸ್ವಯಂಸೇವಕರು, 100 ಕಲಾವಿದರು ಒಟ್ಟು ಸೇರಿ ಈ ರೈಲುನಿಲ್ದಾಣವನ್ನು ಸ್ವಚ್ಛವಾಗಿಸಲಿದ್ದಾರೆ ಮತ್ತು ಸುಂದರವಾದ ಕಲೆಗಳನ್ನು ಇಲ್ಲಿ ಮೂಡಿಸಲಿದ್ದಾರೆ. ಅರ್ಥಪೂರ್ಣ ಸಂದೇಶಗಳನ್ನು ಆಕರ್ಷಕವಾಗಿ ಬರೆಯಲಿದ್ದಾರೆ.
ಗಾಂಧಿ ತತ್ವ, ಸ್ವಚ್ಛತೆ, ಕ್ರೀಡೆ ಮತ್ತು ನಾಗರಿಕತೆ- ಈ ನಾಲ್ಕು ಥೀಮ್ಗಳಲ್ಲಿ ವಿಮಾನನಿಲ್ದಾಣದಲ್ಲಿ ಚಿತ್ತಾರ ಮೂಡಿ ಬರಲಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ವೃತ್ತಿಪರರು ಸೇರಿದಂತೆ ಎಲ್ಲಾ ವಯಸ್ಸಿನ, ವರ್ಗದ ಜನರು ಈ ಕಾರ್ಯಕ್ಕೆ ಕೈಜೋಡಿಸುತ್ತಿದ್ದಾರೆ.
‘ರಂಗ್ ದೇ! ಜೈಪುರ್’ ಹೆಸರಲ್ಲಿ ಇಡೀ ನಗರವನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ ವರ್ಷಗಳಿಂದಲೇ ಇಲ್ಲಿ ನಡೆಯುತ್ತಿದೆ. ನಾಗರಿಕರು ಒಟ್ಟು ಸೇರಿ ಹಲವಾರು ರೈಲು ನಿಲ್ದಾಣ, ಬಸ್ ನಿಲ್ದಾಣಗಳನ್ನು, ಪ್ರವಾಸಿ ತಾಣಗಳನ್ನು ಸ್ವಚ್ಛ ಮಾಡಿ, ಚಿತ್ತಾರಗಳನ್ನು ಮೂಡಿಸಿದ್ದಾರೆ.
ಇನ್ನು ನಾಲ್ಕು ವರ್ಷದಲ್ಲಿ ಜೈಪುರ ರೈಲು ನಿಲ್ದಾಣವೂ ಸ್ವಚ್ಛ, ಸುಂದರವಾಗಿ ಎಲ್ಲರ ಕಣ್ಮನ ಸೆಳೆಯಲಿದೆ.
source; DNA
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.