ಕೋಲ್ಕತ್ತಾ: ದುರ್ಗಾದೇವಿಯ ನವ ಅವತಾರಗಳನ್ನು ಪೂಜಿಸುವ ನವರಾತ್ರಿ ಮತ್ತೆ ಬಂದಿದೆ. ದೇವಿಯನ್ನು ಪುಣೀತಳನ್ನಾಗಿಸಿ ಆಕೆಯಿಂದ ಆಶೀರ್ವಾದ ಪಡೆಯಲು ಭಕ್ತಾದಿಗಳು ಕಾತುರರಾಗಿದ್ದಾರೆ. ಅದರಲ್ಲೂ ದುರ್ಗಾ ಪೂಜೆಗೆ ತುಸು ಹೆಚ್ಚೇ ಪ್ರಾಮುಖ್ಯತೆಯನ್ನು ನೀಡುವ ಕೋಲ್ಕತ್ತಾ ನಗರಿಯ ಮೂಲೆ ಮೂಲೆಯಲ್ಲೂ ವೈಭವೋಪೇತ ಪೆಂಡಾಲ್ಗಳನ್ನು ಹಾಕಲಾಗಿದ್ದು, ನವರಾತ್ರಿ ಸಂಭ್ರಮಕ್ಕೆ ಸ್ವಾಗತ ಕೋರುತ್ತಿದೆ.
ಅದರಲ್ಲೂ ಈ ಬಾರಿ ಚಿತ್ತೋರ್ ಅರಮನೆಯ ಆಕಾರದಲ್ಲಿ ಕೋಲ್ಕತ್ತಾದಲ್ಲಿ ಪೆಂಡಾಲ್ವೊಂದು ನಿರ್ಮಾಣಗೊಂಡಿದ್ದು, ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ರಾಣಾ ರತನ್ ಸಿಂಗ್ ತನ್ನ ಪತ್ನಿ ಪದ್ಮಾವತಿಯೊಂದಿಗೆ ಚಿತ್ತೋರ್ ಅರಮನೆಯಲ್ಲಿ ನೆಲೆಸಿದ್ದ, ಆದರೆ ಬಳಿಕ ಈ ಅರಮನೆಯನ್ನು ಅಲಾವುದ್ದೀನ್ ಖಿಲ್ಜಿ ನಾಶ ಮಾಡಿದ್ದ.
ಇದೀಗ ನವರಾತ್ರಿಯ ಹಿನ್ನಲೆಯಲ್ಲಿ ಶ್ರೀಭೂಮಿ ಸ್ಪೋರ್ಟಿಂಗ್ ಕ್ಲಬ್ ದುರ್ಗಾ ಪೂಜೋ 2018, ಚಿತ್ತೋರ್ ಅರಮನೆಯ ಪೆಂಡಾಲ್ ಹಾಕಿದೆ. ರಾಣಿ ಪದ್ಮಾವತಿಯ ಆಕಾರದಲ್ಲಿ ದುರ್ಗಾಮಾತೆಯನ್ನು ಚಿತ್ರಿಸಲಾಗಿದೆ.
ಇನ್ನೊಂದೆಡೆ ಪಂಚಕುಲದಲ್ಲಿ ವಿಶ್ವದ ಅತೀದೊಡ್ಡ ರಾವಣ ಮೂರ್ತಿ ರಚನೆಯಾಗಿದ್ದು, 215 ಅಡಿ ಎತ್ತರವಿದೆ, ವಿಜಯದಶಮಿಯಂದು ಇದನ್ನು ಭಸ್ಮ ಮಾಡಲಾಗುತ್ತಿದೆ.
Source:Indiatimes.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.