ಮಂಗಳೂರು: ಭಾಷಾ ವೈವಿಧ್ಯತೆಗೆ ಹೆಸರಾಗಿರುವ ಮಂಗಳೂರು ಮೊಟ್ಟಮೊದಲ ಬಾರಿಗೆ ಲಿಟರೇಚರ್ ಫೆಸ್ಟ್ ಆಯೋಜನೆಗೊಳಿಸಲು ಸಜ್ಜಾಗುತ್ತಿದೆ. ನವೆಂಬರ್ 3 ಮತ್ತು 4 ರಂದು ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಹಾಲ್ನಲ್ಲಿ ಫೆಸ್ಟ್ ಆಯೋಜನೆಗೊಳ್ಳುತ್ತಿದೆ.
‘ಐಡಿಯಾ ಆಫ್ ಭಾರತ್’ ಎಂಬ ಥೀಮ್ನೊಂದಿಗೆ ಬಹು ಭಾಷೆಗಳಲ್ಲಿ ಈ ಲಿಟರೇಚರ್ ಫೆಸ್ಟ್ ಆಯೋಜನೆಗೊಳ್ಳುತ್ತಿದೆ.
ಪ್ರಾಚೀನ ವಿಜ್ಞಾನ, ವೈದ್ಯಕೀಯ, ಬಾಹ್ಯಾಕಾಶ ತಂತ್ರಜ್ಞಾನ, ಯೋಗ ಹೀಗೆ ಭಾರತದ ಹತ್ತು ಹಲವು ಕೊಡುಗೆಗಳ ಆಧಾರದಲ್ಲಿ ಭಾರತವನ್ನು ನೋಡುವ ದೃಷ್ಟಿಕೋನ, ಪ್ರಸ್ತುತ ಎದುರಾಗಿರುವ ಸವಾಲುಗಳಿಗೆ ದೇಶವನ್ನು ಸಜ್ಜುಗೊಳಿಸುವ ಬಗೆಗಿನ ಚರ್ಚೆಗಳು ಇಲ್ಲಿ ನಡೆಯಲಿವೆ ಎಂದು ಫೆಸ್ಟ್ ಆಯೋಜಕರು ತಿಳಿಸಿದ್ದಾರೆ.
ಈ ಫೆಸ್ಟ್ನಲ್ಲಿ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪನವರಿಗೆ ಜೀವಮಾನದ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಡಾ.ಡೇವಿಡ್ ಫ್ರಾಲಿ, ಮೇಜರ್ ಗೌರವ್ ಆರ್ಯ, ಆರ್.ಜಗನ್ನಾಥನ್, ಮಧು ಕಿಶ್ವರ್, ವಿವೇಕ್ ಅಗ್ನಿಹೋತ್ರಿ, ಶಿಫಾಲಿ ವೈದ್ಯ, ಆನಂದ್ ರಂಗನಾಥನ್, ಚಕ್ರವರ್ತಿ ಸೂಲಿಬೆಲೆ, ರೋಹಿತ್ ಚಕ್ರತೀರ್ಥ, ಶ್ರದ್ಧಳು ರಾನಡೆ, ಮಕರಂದ ಪರಾಂಜಪೆ, ಅನಿರ್ಬನ್ ಗಂಗೂಲಿ, ಸಹಾನ ವಿಜಯಕುಮಾರ್, ಪ್ರಕಾಶ್ ಬೆಳವಾಡಿ ಸೇರಿದಂತೆ ದೇಶ, ವಿದೇಶಗಳ ಚಿಂತಕರು ಇದರಲ್ಲಿ ಭಾಗಿಯಾಗುತ್ತಿದ್ದಾರೆ.
ನಿಟ್ಟೆ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ವಿನಯ್ ಹೆಗ್ಡೆ, ತರಂಗ ವಾರಪತ್ರಿಕೆ ಪ್ರಧಾನ ಸಂಪಾದಕಿ ಶ್ರೀಮತಿ ಸಂಧ್ಯಾ ಪೈ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಫೆಸ್ಟ್ನ ಪೋಷಕರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.