ಜೈಪುರ: ಚುನಾವಣೆಗೆ ಸಜ್ಜಾಗುತ್ತಿರುವ ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಸಮಾವೇಶವನ್ನು ನಡೆಸಿದ್ದು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವೋಟ್ ಬ್ಯಾಂಕ್ ರಾಜಕೀಯ ಹಾಗೂ ಅಭಿವೃದ್ಧಿ ರಾಜಕೀಯದ ನಡುವೆ ಆಯ್ಕೆ ಮಾಡಿ ಎಂದು ಜನರಿಗೆ ಕರೆ ನೀಡಿರುವ ಅವರು, ಜನರ ಒಳಿತಿಗಾಗಿ ಬಿಜೆಪಿ ಅವಿರತ ಪರಿಶ್ರಮಪಡುತ್ತಿದೆ ಎಂದರು.
ಬಿಜೆಪಿಯನ್ನು ಒಡೆಯಲು ಪ್ರತಿಪಕ್ಷಗಳು ಕಷ್ಟಕರ ಮೈತ್ರಿಯನ್ನು ಮಾಡಿಕೊಳ್ಳುವ ಪ್ರಯತ್ನದಲ್ಲಿದೆ, ಆದರೆ ಬಿಜೆಪಿ ಮಾತ್ರ ದೇಶವನ್ನು ಒಗ್ಗೂಡಿಸುವುದರಲ್ಲಿ ನಿರತವಾಗಿದೆ. ಕೆಲವರು ವೋಟ್ ಬ್ಯಾಂಕ್ನಲ್ಲಿ ನಿರತರಾಗಿದ್ದು, ದೇಶವನ್ನು ಒಡೆಯುದರತ್ತವೇ ಚಿಂತಿಸುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣ ನಮ್ಮ ವ್ಯವಸ್ಥೆಯನ್ನು ನುಂಗಿ ಹಾಕುತ್ತಿದೆ. ಇಂತಹ ರಾಜಕಾರಣ ಮಾಡಲು ಪಕ್ಷಗಳಿಗೆ ಬಿಡಬೇಡಿ ಎಂದು ಜನರಲ್ಲಿ ಅವರು ಮನವಿ ಮಾಡಿಕೊಂಡರು.
‘ರಾಜ್ಯ, ದೇಶಗಳ ಜನರು ನಮ್ಮ ಹೈಕಮಾಂಡ್, ಆದರೆ ಕಾಂಗ್ರೆಸ್ ಹೈಕಮಾಂಡ್ ಒಂದು ಕುಟುಂಬ. ತಮ್ಮ ಹಿತಾಸಕ್ತಿಗಾಗಿ ಅವರು ಯಾವ ಮಟ್ಟಕ್ಕೂ ಇಳಿಯುತ್ತಾರೆ. ಅವರನ್ನು ಅಧಿಕಾರ ನಡೆಸಲು ಬಿಡಬಹುದೇ? ದೇಶವನ್ನು ಲೂಟಿ ಮಾಡಲು ಅವರನ್ನು ಬಿಡಬಹುದೇ? ಅವರು ಅಭಿವೃದ್ಧಿಯ ಹಾದಿಯನ್ನು, ನಾಶದ ಹಾದಿಯಾಗಿ ಪರಿವರ್ತಿಸುತ್ತಾರೆ’ ಎಂದರು.
source; Zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.