ಈ ಯುವ ಪಡೆಯಲ್ಲಿರುವವರ ವಯಸ್ಸು ಸರಾಸರಿ 25ವರ್ಷ. ಇವರಲ್ಲಿ ಶೇ.80ರಷ್ಟು ಮಂದಿ ಐಐಟಿ, ಐಐಎಂ ಸ್ನಾತಕೋತ್ತರ ಪದವೀಧರರು. ಇವರಲ್ಲಿ ಶೇ.70ರಷ್ಟು ಜನರಿಗೆ ಕನಿಷ್ಠ ಎರಡು ವರ್ಷಗಳ ವೃತ್ತಿ ಅನುಭವವಿದೆ-ಇವರೇ 475 ಮಂದಿಯನ್ನೊಳಗೊಂಡ ‘ಜಿಲ್ಲಾ ಸ್ವಚ್ಛ ಭಾರತ್ ಪ್ರೇರಕ’ರು. ಟಾಟಾ ಟ್ರಸ್ಟ್ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ‘ಸ್ವಚ್ಛ ಭಾರತ’ಕ್ಕೆ ಇವರನ್ನು ಕೊಡುಗೆಯಾಗಿ ನೀಡಿದೆ.
2017ರ ಎಪ್ರಿಲ್ನಿಂದ ಗ್ರಾಮೀಣ ಜಿಲ್ಲೆಗಳಲ್ಲಿ ಈ ತಂಡವನ್ನು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡುವುದಕ್ಕಾಗಿ ನಿಯೋಜನೆಗೊಂಡಿದೆ. ಒಂದು ವರ್ಷದ ಟರ್ಮ್ ಕಾಂಟ್ರ್ಯಾಕ್ಟ್ ಆಧಾರದಲ್ಲಿ ಇವರು ನಿಯೋಜಿತರಾಗಿದ್ದು, ಸ್ವಚ್ಛ ಭಾರತಕ್ಕೆ ಹೊಸ ಚೈತನ್ಯ, ಉತ್ಸಾಹವನ್ನು ನೀಡಿದ್ದಾರೆ. ಜನರಿಗೆ ಟಾಯ್ಲೆಟ್ ಬಳಸುವುದು, ಕಸ ಹಾಕದಂತೆ ಪ್ರೇರೇಪಿಸುವುದು ಮುಂತಾದ ಅಭ್ಯಾಸ ಬದಲಾವಣೆ ಪ್ರಕ್ರಿಯೆಯಲ್ಲಿ ಇವರು ನಿರತರಾಗಿದ್ದಾರೆ.
2014ರಿಂದ ದೇಶದಲ್ಲಿ 8.7 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ, ಇದರಲ್ಲಿ ಶೇ.90ರಷ್ಟನ್ನು ಜನರು ಬಳಸುತ್ತಿದ್ದಾರೆ. ಈ ಪ್ರೇರಕರು ಜನರಿಗೆ ಶೌಚಾಲಯದ ಬಳಕೆಗೆ ಉತ್ತೇಜಿಸುತ್ತಿದ್ದಾರೆ. ಅಷ್ಟೇ ಅಲ್ಲ, ಸರ್ಕಾರದ ಬಹುದೊಡ್ಡ ಯೋಜನೆಯಾದ ಪೋಷಣ್ ಅಭಿಯಾನದಲ್ಲೂ ಕೈಜೋಡಿಸುತ್ತಿದ್ದಾರೆ.
ಸುಮಾರು 18 ಸಾವಿರ ಪ್ರೊಫೈಲ್ಗಳನ್ನು ಆಯ್ದು, 400 ಮಂದಿಯನ್ನು ಸಂದರ್ಶನ ಮಾಡಿ, 475 ಪ್ರೇರಕರನ್ನು ಆಯ್ಕೆ ಮಾಡಲಾಗಿದೆ. ಯೂನಿವರ್ಸಿಟಿ ಆಫ್ ಚಿಕಾಗೋ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್ನೊಂದಿಗೆ ಕೈಜೋಡಿಸಿರುವ ಟಾಟಾ ಟ್ರಸ್ಟ್, ಪ್ರೇರಕರಿಗೆ ತರಬೇತಿಯನ್ನು ನೀಡಿ ಗ್ರಾಮೀಣ ಭಾಗದಲ್ಲಿ ನಿಯೋಜನೆಗೊಳಿಸಿದೆ.
ಪ್ರೇರಕರು ಸ್ವಚ್ಛ ಭಾರತದ ಗುರಿಯನ್ನು ತಲುಪುವುದಕ್ಕಾಗಿ ತಂತ್ರಜ್ಞಾನ, ಸಂಶೋಧನೆಗಳ ಮೂಲಕ ಸಮಸ್ಯೆಗೆ ಪರಿಹಾರ ಹುಡುಕುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಈ ಮೂಲಕ ಸ್ವಚ್ಛ ರಾಷ್ಟ್ರ ನಿರ್ಮಾಣಕ್ಕೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ.
source; The economic times
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.