ನವದೆಹಲಿ: ಮೂವರು ಉಪ ಭದ್ರತಾ ಸಲಹೆಗಾರರನ್ನು ಹೊಂದುವ ಮೂಲಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಪ್ರಮುಖ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದ್ದಾರೆ. ಗುಪ್ತಚರ ಇಲಾಖೆಯ ವಿಶೇಷ ನಿರ್ದೇಶಕರಾಗಿದ್ದ ಆರ್ಎನ್ ರವಿ ಶುಕ್ರವಾರ ಮೂರನೇ ಉಪ ಭದ್ರತಾ ಸಲಹೆಗಾರರಾಗಿ ನೇಮಕವಾಗಿದ್ದಾರೆ.
ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ನ ಮಾಜಿ ಕಾರ್ಯದರ್ಶಿ ರಾಜೇಂದ್ರ ಖನ್ನಾ, ಮಾಜಿ ರಾಜತಂತ್ರಜ್ಞ ಪಂಕಜ್ ಸರನ್ ಅವರು ಈಗಾಗಲೇ ಅಜಿತ್ ಅವರ ಉಪ ಭದ್ರತಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರವಿ ಈ ಸಾಲಿಗೆ ಹೊಸ ಸೇರ್ಪಡೆ. ಈ ಮೂವರ ಬೆಂಬಲದೊಂದಿಗೆ ಅಜಿತ್ ದೋವಲ್ ಅವರು ಇನ್ನಷ್ಟು ದಿಟ್ಟ ನಡೆಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗಲಿದೆ.
ಖನ್ನಾ ಅವರು 1978ರ ಬ್ಯಾಚ್ನ ಅಧಿಕಾರಿ ಮತ್ತು ಸರನ್ 1982ರ ಬ್ಯಾಚ್ನ ಅಧಿಕಾರಿ, ಇವರಿಬ್ಬರ ನಡುವೆ 1976ರ ಬ್ಯಾಚ್ನ ಅಧಿಕಾರಿಯಾಗಿರುವ ರವಿ ಹೆಚ್ಚು ಸೀನಿಯರ್ ಆಗಿದ್ದಾರೆ. ನಾಗಾ ಬಂಡುಕೋರರ ವಿಷಯದಲ್ಲಿ ಕೇಂದ್ರ ಸಂವಾದಕರಾಗಿರುವ ರವಿ, 2015ರಲ್ಲಿ ನಾಗಾ ಮತ್ತು ಕೇಂದ್ರದ ನಡುವೆ ನಡೆದ ಶಾಂತಿ ಒಪ್ಪಂದದಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಿದ್ದಾರೆ.
ರವಿ ಅವರು ಈ ಹಿಂದೆಯೂ ಅಜಿತ್ ದೋವಲ್ ಅವರೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ದೋವಲ್ ಇಂಟೆಲಿಜೆನ್ಸ್ ಬ್ಯುರೋ ನಿರ್ದೇಶಕರಾಗಿದ್ದ ವೇಳೆ ಇವರು, ಐಬಿಯ ವಿಶೇಷ ನಿರ್ದೇಶಕರಾಗಿ ಈಶಾನ್ಯ ಭಾಗವನ್ನು ನಿಭಾಯಿಸುತ್ತಿದ್ದರು. ವಿಶೇಷವೆಂದರೆ, ದೋವಲ್ ಹಾಗೂ ರವಿ ಇಬ್ಬರೂ ಕೇರಳ ಕೇಡರ್ನ ಐಪಿಎಸ್ ಅಧಿಕಾರಿಗಳಾಗಿದ್ದಾರೆ. ದೋವಲ್ ಅವರು 8 ಬ್ಯಾಚ್ ಹಿರಿಯರಾಗಿದ್ದಾರೆ.
source; NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.