ದೇಶದಲ್ಲಿ ನಡೆಯುತ್ತಿರುವ ಸ್ವಚ್ಛ ಭಾರತ ಅಭಿಯಾನ ಜನರಲ್ಲಿ ಸ್ವಚ್ಛತೆಯ ಅರಿವನ್ನು ಮೂಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಬಸ್ಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಕುಳಿತುಕೊಂಡು ಕಸವನ್ನು ಬಿಸಾಕುತ್ತಿದ್ದ ಮಂದಿ, ಈಗ ಕಸ ಬಿಸಾಡುವ ಮುನ್ನ ತುಸು ಯೋಚನೆ ಮಾಡಲಾರಂಭಿಸಿದ್ದಾರೆ. ಅಲ್ಲದೇ, ಕಸ ಬಿಸಾಕುವವರನ್ನು ತತ್ಕ್ಷಣವೇ ತರಾಟೆಗೆ ತೆಗೆದುಕೊಂಡು ಅವರಿಗೆ ಬುದ್ಧಿ ಕಲಿಸುವ ಸ್ವಚ್ಛತಾ ಸ್ವಯಂಸೇವಕರನ್ನೂ ಇಂದು ನಾವು ಕಾಣುತ್ತಿದ್ದೇವೆ. ದೇಶದ ಜನರೆಲ್ಲಾ ಒಗ್ಗೂಡಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದರೆ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿ ಕಂಡಂತಹ ಸ್ವಚ್ಛ ರಾಷ್ಟ್ರ ನಿರ್ಮಾಣದ ಕನಸು ಸಕಾರವಾಗುವ ದಿನ ದೂರವಿಲ್ಲ.
ಇಲ್ಲೊಬ್ಬರು, ಬಸ್ನಲ್ಲಿನ ಪ್ರಯಾಣಿಕನೊಬ್ಬ ಹೊರಗೆಸೆದ ಪ್ಲಾಸ್ಟಿಕ್ ಕವರ್ನ್ನು ಬಸ್ ನಿಲ್ಲಿಸಿ ಆತನಿಗೆಯೇ ವಾಪಾಸ್ ಮಾಡಿದ್ದಾರೆ. ಅಷ್ಟೇ ಅಲ್ಲ, ಸ್ವಚ್ಛತೆಯನ್ನು ನಿರ್ಲಕ್ಷ್ಯ ಮಾಡಿದ ಆತನನ್ನು ಎಲ್ಲರ ಮುಂದೆಯೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಬುದ್ಧಿ ಕಲಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಖತ್ ವೈರಲ್ ಆಗಿದೆ.
Let me summarise this in short
What you see in this video is sheer concern on the land he lives. If every citizen thinks his way the dream of @swachhbharat will just b couple of years away from becoming reality. #Swachhata is a way of life let’s all practice it #SwachhataHiSeva pic.twitter.com/7YwyHZhYC0
— Arvind Limbavali (@bjparvind) October 5, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.