ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಅತೀ ಮಹತ್ವಪೂರ್ಣ ಆರೋಗ್ಯ ಯೋಜನೆಯಾದ ’ಆಯುಷ್ಮಾನ್ ಭಾರತ್’ ಆರಂಭಗೊಂಡ ಕೇವಲ 10 ದಿನಗಳಲ್ಲೇ 23 ಸಾವಿರಕ್ಕೂ ಅಧಿಕ ರೋಗಿಗಳಿಗೆ ಪ್ರಯೋಜನ ನೀಡಿದೆ.
ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಯಡಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಇದುವರೆಗೆ ರೂ.38.1 ಕೋಟಿ ಮೊತ್ತದ ಸುಮಾರು 23,287 ವೈದ್ಯಕೀಯ ವಿಮೆಯನ್ನು ಮಂಜೂರು ಮಾಡಲಾಗಿದೆ. ಪ್ರತಿ ರೋಗಿಗೆ ಅಂದಾಜು ಸರಾಸರಿ ರೂ,19.357ನ್ನು ಈ ಯೋಜನೆಯ ಮೂಲಕ ಒದಗಿಸಲಾಗಿದೆ ಎಂದು ಹಿಂದೂ ಬ್ಯುಸಿನೆಸ್ ಲೈನ್ ವರದಿಯಲ್ಲಿ ತಿಳಿಸಿದೆ.
ಆಯುಷ್ಮಾನ್ ಭಾರತ್ ಸಿಇಓ ಇಂದು ಭೂಷಣ್ ಉಲ್ಲೇಖಿಸಿರುವಂತೆ, ಫ್ಯಾಮಿಲಿ ಕಾರ್ಡ್ನೊಂದಿಗೆ 1.7 ಕೋಟಿ ಫಲಾನುಭವಿಗಳ ಪತ್ರವನ್ನು ಪ್ರಧಾನಿ ಸಚಿವಾಲಯದಿಂದ ದೇಶದಾದ್ಯಂತ ಕಳುಹಿಸಿಕೊಡಲಾಗಿದೆ. ಅವರು ಹೇಳುವಂತೆ, ಯೋಜನೆ ಆರಂಭಗೊಂಡ ಮೊದಲ ಆರು ದಿನಗಳಲ್ಲೇ ರೂ.೨೫ ಕೋಟಿ ಮೊತ್ತದ 13 ಸಾವಿರ ಕ್ಲೇಮ್ಗಳನ್ನು ಸ್ವೀಕಾರ ಮಾಡಲಾಗಿದೆ.
ಈ ವಾರದ ಆರಂಭದಲ್ಲಿ 32,814ಆಸ್ಪತ್ರೆಗಳು ಯೋಜನೆ ವ್ಯಾಪ್ತಿಗೆ ಬರಲು ಅರ್ಜಿ ಹಾಕಿವೆ, ಇದರಲ್ಲಿ 13,685 ಈಗಾಗಲೇ ವ್ಯಾಪ್ತಿಗೆ ಬಂದಿವೆ, ಕೆಲವು ಈ ಪ್ರಕ್ರಿಯೆಯಲ್ಲಿವೆ. ಹಲವಾರು ಆಸ್ಪತ್ರೆಗಳಲ್ಲಿ ಆಯುಷ್ಮಾ ಮಿತ್ರಾ ಅಥವಾ ಪ್ರಧಾನ ಮಂತ್ರಿ ಆರೋಗ್ಯ ಮಿತ್ರಾಗಳು ಇನ್ನಷ್ಟೇ ರಚನೆಯಾಗಬೇಕಿವೆ.
ದೇಶದ 31 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಈ ಯೋಜನೆಯನ್ನು ಸ್ವೀಕಾರ ಮಾಡಿದ್ದು, ಯಾವುದೇ ಅಡೆತಡೆ ಇಲ್ಲದೆ ಯೋಜನೆ ವಿಸ್ತರಣೆಗೊಳ್ಳುತ್ತಿದ್ದು, ಬಡ ಕುಟುಂಬಗಳ ಪಾಲಿಗೆ ಆಶಾಕಿರಣವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.