ನವದೆಹಲಿ: ಸುನಾಮಿ, ಭೂಕಂಪದಿಂದ ಅಕ್ಷರಶಃ ನಲುಗಿ ಹೋಗಿರುವ ಇಂಡೋನೇಷ್ಯಾಗೆ ಭಾರತ ನೆರವಿನ ಹಸ್ತ ಚಾಚಿದೆ. ಆ ದೇಶಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ‘ಆಪರೇಶನ್ ಸಮುದ್ರ ಮೈತ್ರಿ’ಯನ್ನು ಆರಂಭಿಸಲಾಗಿದ್ದು, ಎರಡು ಏರ್ಕ್ರಾಫ್ಟ್ ಮತ್ತು 3 ನೌಕಾ ಹಡಗುಗಳ ಮೂಲಕ ಅಲ್ಲಿಗೆ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಕೊಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೊಡೊ ಅವರಿಗೆ ಅಕ್ಟೋಬರ್ 1ರಂದು ಫೋನಾಯಿಸಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಬಳಿಕ ಭಾರತ ಸರ್ಕಾರ ‘ಅಪರೇಶನ್ ಸಮುದ್ರ ಮೈತ್ರಿ’ಯನ್ನು ಆರಂಭಿಸಿ ಇಂಡೋನೇಷ್ಯಾದ ನೆರವಿಗೆ ಧಾವಿಸಿದೆ.
ಸಿ-130ಜೆ ಮತ್ತು ಸಿ-17 ಎಂಬ ಎರಡು ಏರ್ಕ್ರಾಫ್ಟ್ಗಳ ಮೂಲಕ ವೈದ್ಯಕೀಯ ಸಿಬ್ಬಂದಿ ಮತ್ತು ಪರಿಹಾರ ಸಾಮಾಗ್ರಿಗಳನ್ನು ಭಾರತ ಅಲ್ಲಿಗೆ ಕಳುಹಿಸಿಕೊಟ್ಟಿದೆ.
ನೌಕಾ ಹಡಗುಗಳಾದ ಐಎನ್ಎಸ್ ತೀರ್, ಐಎನ್ಎಸ್ ಸುಜಾತ, ಐಎನ್ಎಸ್ ಶಾರ್ದುಲ್ ಮೂಲಕವು ಅಪಾರ ಪ್ರಮಾಣದ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿಕೊಡಲಾಗಿದ್ದು, ಅ.6ಕ್ಕೆ ಇದು ಇಂಡೋನೇಷ್ಯಾವನ್ನು ತಲುಪಲಿದೆ.
ಈಗಾಗಲೇ ಇಂಡೋನೇಷ್ಯಾದಲ್ಲಿ ಭೀಕರ ಸುನಾಮಿ ಮತ್ತು ಭೂಕಂಪದ ಕಾರಣದಿಂದಾಗಿ 1,400 ಮಂದಿ ಅಸುನೀಗಿದ್ದಾರೆ. ಹಲವಾರು ಜನರು ಗಾಯಗೊಂಡು ನರಳಾಡುತ್ತಿದ್ದಾರೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.