ಬೆಂಗಳೂರು: ಇನ್ಫೋಸಿಸ್ ಮುಖ್ಯಸ್ಥೆ, ಬರಹಗಾರ್ತಿ ಸುಧಾ ಮೂರ್ತಿಯವರಿಗೆ ಮೈಸೂರು ದಸರಾವನ್ನು ಉದ್ಘಾಟನೆಗೊಳಿಸಲು ಬುಧವಾರ ರಾಜ್ಯ ಸರ್ಕಾರ ಅಧಿಕೃತ ಆಹ್ವಾನವನ್ನು ನೀಡಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಜಿ.ಟಿ ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಮೈಸೂರು ಡಿಸಿ ಅಭಿರಾಮ್ ಜಿ ಶಂಕರ್ ಮುಂತಾದವರು ಬೆಂಗಳೂರಿನ ಜಯನಗರದಲ್ಲಿನ ಸುಧಾಮೂರ್ತಿಯವರ ಮನೆಗೆ ತೆರಳಿ ದಸರಾ ಉದ್ಘಾಟಿಸಲು ಆಮಂತ್ರಣವನ್ನು ನೀಡಿದರು.
ಅಕ್ಟೋಬರ್ 10ರಿಂದ ನಾಡಹಬ್ಬ ದಸರಾ ಆರಂಭಗೊಳ್ಳಲಿದ್ದು, ಈ ಬಾರಿ ಕೊಡಗು ನೆರೆಯ ಹಿನ್ನಲೆಯಲ್ಲಿ ಸರಳವಾಗಿ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದೆ.
ಗಜರಾಜ ಅರ್ಜುನ ನೇತೃತ್ವದ ಗಜಪಡೆಗಳು ದಸರಾ ವೈಭವಕ್ಕೆ ಸಜ್ಜಾಗುತ್ತಿದೆ, ಅರಮನೆಯನ್ನು ಸುಣ್ಣ ಬಣ್ಣ ನೀಡಿ ಆಕರ್ಷಕಗೊಳಿಸುವ ಪ್ರಕ್ರಿಯೆಗಳು ಜರಗುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.