ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು, ತಮ್ಮ ಸರ್ಕಾರದಲ್ಲಿ ಪ್ರತ್ಯೇಕ ’ಗೋವು ಸಚಿವಾಲಯ’ವನ್ನು ರಚನೆ ಮಾಡುವ ಬಗ್ಗೆ ಗಂಭೀರ ಚಿಂತನೆ ಆರಂಭಿಸಿದ್ದಾರೆ.
ಪ್ರಸ್ತುತ ಆ ರಾಜ್ಯದಲ್ಲಿ ಗೋವು ಸಂವರ್ಧನ್ ಮಂಡಳಿ ಇದೆ, ಇದರ ಬದಲಿಗೆ ‘ಗೋವು ಸಚಿವಾಲಯ’ವನ್ನೇ ರಚನೆ ಮಾಡುವ ಬಗ್ಗೆ ಅವರು ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಮಂಡಳಿಗಳಿಗೆ ಕೆಲವೊಂದು ನಿಬಂಧನೆಗಳಿರುತ್ತವೆ, ಆದರೆ ಸಚಿವಾಲಯಗಳಿಗೆ ಇರುವುದಿಲ್ಲ. ಹೀಗಾಗಿ ಗೋ ಸಂವರ್ಧನ್ ಮಂಡಳಿ ಬದಲು ಗೋವು ಸಚಿವಾಲಯವನ್ನೇ ರಚನೆ ಮಾಡುವುದು ಒಳಿತು ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಚೌವ್ಹಾಣ್ ಹೇಳಿಕೊಂಡಿದ್ದಾರೆ.
ಗೋಶಾಲೆಗಳನ್ನು ಹೆಚ್ಚು ಹೆಚ್ಚು ತೆರೆಯುವುದು ಒಳಿತು, ಆದರೆ ಗೋವುಗಳನ್ನು ಹೆಚ್ಚಾಗಿ ಮನೆಯಲ್ಲೇ ಸಾಕಲು ನಾವು ಪ್ರಾಮುಖ್ಯತೆ ಕೊಡಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
source; TIMES OF INDIA
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.