ಡೆಹ್ರಾಡೂನ್: ಹೊರ ಜಗತ್ತಿಗೆ ಇನ್ನೂ ತೆರೆದುಕೊಳ್ಳದ ಉತ್ತರಾಖಂಡದಲ್ಲಿನ ಹಿಮಾಚಲದ ಶಿಖರಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನಿಡಲಾಗುತ್ತಿದೆ. ಈ ಬಗ್ಗೆ ಅಲ್ಲಿನ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಘೋಷಣೆ ಮಾಡಿದ್ದಾರೆ.
ಶೀಘ್ರದಲ್ಲೇ ಉತ್ತರಾಕಾಶಿಯಲ್ಲಿನ ನೆಹರೂ ಇನ್ಸ್ಟಿಟ್ಯೂಟ್ ಆಫ್ ಮೌಂಟೆನಿಯರ್ಸ್ನ ಪರ್ವತಾರೋಹಿಗಳು ಹಿಮಾಲಯವನ್ನೇರಿ ಈ ಶಿಖರವನ್ನು ಪತ್ತೆ ಮಾಡಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
‘ಹಿಮಾಲಯದ ಅಪರಿಚಿತ ಶಿಖರಕ್ಕೆ ವಾಜಪೇಯಿ ಅವರ ಹೆಸರನ್ನಿಡಲು ಯೋಜನೆ ರೂಪಿಸಿದ್ದೇವೆ. ಪರ್ವತಾರೋಹಿಗಳ ತಂಡ ಈ ಶಿಖರದ ಪತ್ತೆಗೆ ಶೀಘ್ರದಲ್ಲೇ ಯಾತ್ರೆ ಆರಂಭಿಸಲಿದೆ’ ಎಂದು ಸತ್ಪಾಲ್ ಹೇಳಿದ್ದಾರೆ.
ವಾಜಪೇಯಿ ಅವರು ಪ್ರಕೃತಿ ಮತ್ತು ಹಿಮಾಲಯದ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದರು, ಈ ಹಿನ್ನಲೆಯಲ್ಲಿ ಹಿಮ ಶಿಖರಕ್ಕೆ ಅವರ ಹೆಸರಿಡಲು ನಿರ್ಧರಿಸಲಾಯಿತು ಎಂದಿದ್ದಾರೆ.
Source: ndtv
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.