ಕೊರ್ಬ: ಛತ್ತೀಸ್ಗಢವನ್ನು ಅಭಿವೃದ್ಧಿಪಡಿಸಬೇಕು ಎಂಬ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸನ್ನು ಸಿಎಂ ರಮಣ್ ಸಿಂಗ್ ನನಸಾಗಿಸಿದ್ದಾರೆ ಎಂದು ಕೇಂದ್ರ ರೈಲ್ವೇ ಸಚಿವೆ ಪಿಯೂಶ್ ಗೋಯಲ್ ಹೇಳಿದ್ದಾರೆ.
ರಮಣ್ ಸಿಂಗ್ ಅವರು ಆಯೋಜನೆಗೊಳಿಸಿರುವ ‘ಅಟಲ್ ವಿಕಾಸ್ ಯಾತ್ರಾ’ದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಅಟಲ್ ಜೀ ಅವರು ಛತ್ತೀಸ್ಗಢದ ಬಗ್ಗೆ ಕನಸು ಕಂಡಿದ್ದರು, ಪ್ರತಿ ವರ್ಗದ ಭವ್ಯ ಭವಿಷ್ಯವನ್ನೊಳಗೊಂಡ ಅಭಿವೃದ್ಧಿಯಿಂದ ಛತ್ತೀಸ್ಗಢ ಪ್ರೇರಣೆಗೊಳ್ಳಬೇಕು ಎಂದು ಬಯಸಿದ್ದರು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿಯವರೂ ಭಾರತ ಸೂಪರ್ ಪವರ್ ಆಗಲು ಪೂರ್ವ ಮತ್ತು ಈಶಾನ್ಯ ಭಾಗಗಳ ಪರಿವರ್ತನೆ ಅಗತ್ಯ ಎಂಬುದನ್ನು ಮನಗಂಡಿದ್ದಾರೆ’ ಎಂದರು.
‘ರಮಣ್ ಸಿಂಗ್ ಅವರು ಛತ್ತೀಸ್ಗಢದ ಅಭಿವೃದ್ಧಿಯ ಕನಸನ್ನು ನನಸಾಗಿಸಿದ್ದಾರೆ ಎಂಬುದು ನಮಗೆಲ್ಲ ಹೆಮ್ಮೆಯ ಸಂಗತಿ’ ಎಂದರು.
ಛತ್ತೀಸ್ಗಢದಲ್ಲಿ ರೈಲ್ವೇ ಅಭಿವೃದ್ಧಿಗೆ ರೂ.16 ಸಾವಿರ ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ ರೂ 10 ಸಾವಿರ ಕೋಟಿಗಳ ಹೂಡಿಕೆ ಮಾಡಲಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.