ಜಿನೆವಾ: ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ತಾಲಿಬಾನ್ ಖಾನ್ ಎಂದು ಜರೆದಿರುವ ಕಾಶ್ಮೀರಿ ಹೋರಾಟಗಾರರು, ಇಸ್ಲಾಮಾಬಾದ್ ಅಂತಾರಾಷ್ಟ್ರೀಯ ಸಮುದಾಯದ ದಾರಿ ತಪ್ಪಿಸುತ್ತಿದೆ ಎಂದು ವಿಶ್ವಸಂಸ್ಥೆಗೆ ತಿಳಿಸಿದ್ದಾರೆ.
‘ಇಮ್ರಾನ್ ಖಾನ್ ಅವರಿಂದಾಗಿ ಹೊಸ ಸರ್ಕಾರದ ಆಡಳಿತದಲ್ಲಿ ಪಾಕಿಸ್ಥಾನದ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಅವರು ಆಕ್ಸ್ಫರ್ಡ್ಗೆ ಹೋಗಿದ್ದರು ಏನೂ ಪ್ರಯೋಜನವಿಲ್ಲ. ಅವರನ್ನು ತಾಲಿಬಾನ್ ಖಾನ್ ಎಂದು ಕರೆಯಲಾಗುತ್ತದೆ. ಏಕೆಂದರೆ ತಾಲಿಬಾನ್ ಯೂನಿವರ್ಸಿಟಿ ಎಂದು ಕರೆಯಲಾಗುವ ಖೈಬರ್ ಪಕ್ತುನ್ಖ್ವಾ ಮದರಸಕ್ಕೆ ಅವರು ತಮ್ಮ ಅಧಿಕೃತ ಬಜೆಟ್ನಿಂತ ರೂ.30ಕೋಟಿ ನೀಡಿದ್ದಾರೆ. ಹಾಗಾದರೆ ಅವರು ಕೊಲ್ಲುವವರಿಗೆ, ಮತಾಂತರ ಮಾಡುವವರಿಗೆ ಅನಧಿಕೃತವಾಗಿ ಅವರು ಎಷ್ಟು ಹಣವನ್ನು ನೀಡಬಹುದೆಂದು ಯೋಚಿಸಿ’ ಎಂದು ಪಿಓಕೆ ಹೋರಾಟಗಾರ ಡಾ.ಶಬೀರ್ ಚೌಧುರಿ ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸೆಷನ್ನ ಸೈಡ್ಲೈನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಪಿಓಕೆಯಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಮೂಲಭೂತವಾದಿತನದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪಿಓಕೆ ಭಯೋತ್ಪಾದಕರ ಹಬ್ ಆಗಿದೆ, ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಈ ಭಾಗವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮತ್ತೊಬ್ಬ ಹೋರಾಟಗಾರ ಶೌಕತ್ ಅಲಿ ಕಶ್ಮೀರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.