ಗುರುಗ್ರಾಮದ 15 ವರ್ಷದ ಬಾಲಕಿಯೊಬ್ಬಳ ಚಿಂತನೆಯ ಫಲವಾಗಿ ಇಂದು ಗುರುಗ್ರಾಮ ಸಂಸ್ಥೆಯೊಂದರಲ್ಲಿ ಆಶ್ರಯವನ್ನು ಪಡೆದುಕೊಂಡಿರು 500 ನಿರ್ಗತಿಕ, ಬಡ ಜನರ ನೀರಿನ ಬವಣೆ ನೀಗಿ, ನಿತ್ಯ 10 ಸಾವಿರ ಲೀಟರ್ ನೀರು ಅವರಿಗೆ ದೊರೆಯುವಂತಾಗಿದೆ.
ಪಾಥ್ವೇಸ್ ಸ್ಕೂಲ್ ವಿದ್ಯಾರ್ಥಿಯಾಗಿರುವ ತವಿಶಿ, ಸುಮಾರು 500 ಮಂದಿ ನಿರ್ಗತಿಕರು ಆಶ್ರಯ ಪಡೆದುಕೊಂಡಿರುವ ಅರ್ತ್ ಸೇವಿಯರ್ಸ್ ಫೌಂಡೇಶನ್ನಲ್ಲಿ ಮಳೆ ನೀರು ಕೊಯ್ಲು ಯೋಜನೆಯನ್ನು ಅಳವಡಿಸಿದ್ದರು. ಇದರಿಂದಾಗಿ ನಿತ್ಯ ಇಲ್ಲಿನ ಜನರಿಗೆ 10 ಸಾವಿರ ಲೀಟರ್ ನೀರು ಸಿಗುತ್ತಿದೆ.
ಕೆಟ್ಟೋ ಎಂಬ ಫಂಡ್ ರೈಸಿಂಗ್ ವೇದಿಕೆಯನ್ನು ಸ್ಥಾಪಿಸಿ, ಅದರಿಂದ ಸುಮಾರು 2 ಲಕ್ಷದವರೆಗೆ ಹಣವನ್ನು ಸಂಗ್ರಹಿಸಿ ಅವರು ಈ ಸಂಸ್ಥೆಯಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿದ್ದರು. ಆಕೆಯ ಶಾಲೆ ಮತ್ತು ಸಂಸ್ಥೆಯ ಬೆಂಬಲವೂ ಆಕೆಗೆ ದೊರಕಿತ್ತು.
ಚೆನ್ನೈನ ರೈನ್ ಮ್ಯಾನ್ ಎಂದು ಖ್ಯಾತಿ ಪಡೆದಿರುವ ಶೇಖರ್ ರಾಘವನ್ ಆಕೆಗೆ ತನ್ನ ಐಡಿಯಾವನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲು ಸಹಕರಿಸಿದರು. ಎಂಜಿನಿಯರ್ಗಳು, ಪೊಲೀಸ್ ಅಧಿಕಾರಿಗಳೂ ಆಕೆಗೆ ಬೆನ್ನೆಲುಬಾಗಿ ನಿಂತರು. ಆಕೆಯ ಪರಿಶ್ರಮದ ಫಲವಾಗಿ ಹರಿದು ವ್ಯರ್ಥವಾಗುತ್ತಿದ್ದ ನೀರು, ಸೇವಿಯರ್ಸ್ ಫೌಂಡೇಶನ್ ಆವರಣದಲ್ಲಿ ಇಂಗಿ ಅಲ್ಲಿನ ಜನರ ಉಪಯೋಗಕ್ಕೆ ಸಿಗುತ್ತಿದೆ.
Source: The BetterIndia.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.