ಮುಂಬಯಿ: ಬಾಲಿವುಡ್ ತಾರೆಗಳಾದ ವರುಣ್ ಧವನ್ ಮತ್ತು ಅನುಷ್ಕಾ ಶರ್ಮಾ ಅವರು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಸ್ಕಿಲ್ ಇಂಡಿಯಾ’ ಯೋಜನೆಯ ರಾಯಭಾರಿಗಳಾಗಿ ನೇಮಕವಾಗಿದ್ದಾರೆ.
ಈ ಇಬ್ಬರು ನಟಿಸಿದ ‘ಸುಯಿ ಧಾಗಾ-ಮೇಡ್ ಇನ್ ಇಂಡಿಯಾ’ ಸಿನಿಮಾ ಭಾರತದ ಉದ್ಯಮಶೀಲತೆಯನ್ನು, ಕಾರ್ಯಪಡೆಯನ್ನು, ದೇಶೀ ಕಲಾವಿದರನ್ನು, ಕರಕುಶಲಕರ್ಮಿಗಳನ್ನು, ನೇಕಾರರನ್ನು ಮನ್ನಣೆಗೆ ಪಾತ್ರವಾಗುವಂತೆ ಮಾಡಿದೆ.
ಈ ಸಿನಿಮಾ ಭಾರತದ ಅತ್ಯಂತ ಪ್ರತಿಭಾನ್ವಿತ ಕರಕುಶಲಕರ್ಮಿಗಳ, ಕೌಶಲ್ಯಯುತ ಕಾರ್ಮಿಕರ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಇದೀಗ ಸಿನಿಮಾದಲ್ಲಿ ಅಭಿನಯ ಮಾಡಿರುವ ಅನುಷ್ಕಾ ಮತ್ತು ವರುಣ್ ‘ಸ್ಕಿಲ್ ಇಂಡಿಯಾ’ ಯೋಜನೆಯನ್ನು ಪ್ರಚಾರಪಡಿಸಲಿದ್ದಾರೆ. ಈ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಘೋಷಣೆ ಮಾಡಿದ್ದಾರೆ.
Source: News Bharati
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.