ಶ್ರೀನಗರ: ಜಮ್ಮು ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರ ಗಂಡೇಟಿಗೆ ಬಲಿಯಾದ ಯೋಧ ಮುಕ್ತಾರ್ ಅಹ್ಮದ್ ಮಲಿಕ್ ಅವರು, ಅಂತಿಮ ಕ್ಷಣದಲ್ಲೂ ಸೇನಾ ರಹಸ್ಯವನ್ನು ಬಚ್ಚಿಟ್ಟು ತಮ್ಮ ದೇಶಪ್ರೇಮ ಎಂತದ್ದು ಎಂಬುದನ್ನು ಸಾಬೀತುಪಡಿಸಿದ್ದಾರೆ.
‘ನನ್ನನ್ನು ಬೇಕಿದ್ದರೆ ಕೊಂದು ಹಾಕಿ, ಆದರೆ ಸೇನಾ ಕಾರ್ಯಾಚರಣೆಯ ಬಗೆಗಿನ ಯಾವುದೇ ಮಾಹಿತಿಯನ್ನು ಕೇಳಬೇಡಿ’ ಎಂದು ಅವರು ಉಗ್ರರಿಗೆ ಕೊನೆ ಕ್ಷಣದಲ್ಲಿ ಹೇಳಿದ್ದಾರೆ.
ಸೆ.15ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟ 18 ವರ್ಷದ ಮಗನ ಅಂತ್ಯಸಂಸ್ಕಾರಕ್ಕೆಂದು ಕುಲ್ಗಾಂನಲ್ಲಿನ ಚುರತ್ ಗ್ರಾಮದ ತಮ್ಮ ನಿವಾಸಕ್ಕೆ ಇವರು ಆಗಮಿಸಿದ್ದರು. ಈ ವೇಳೆ ಪತ್ರಕರ್ತರ ಸೋಗಿನಲ್ಲಿ ಬಂದ ಉಗ್ರರು ಇವರನ್ನು ಮನೆಯಿಂದ ಹೊರಗೆ ಕರೆತಂದು ಸೇನೆಯ ಬಗ್ಗೆ ಮಾಹಿತಿ ನೀಡುವಂತೆ ಪೀಡಿಸಿದ್ದಾರೆ. ಇದಕ್ಕೊಪ್ಪದ ಅವರು, ನನ್ನನ್ನು ಬೇಕಿದ್ದರೆ ಕೊಂದು ಹಾಕಿ, ಆದರೆ ಸೇನಾ ಮಾಹಿತಿಯನ್ನು ಕೇಳಬೇಡಿ ಎಂದಿದ್ದಾರೆ, ಇದರಿಂದ ರೋಸಿಹೋದ ಉಗ್ರರು ಅವರಿಗೆ ಗುಂಡಿಟ್ಟು ಕೊಲೆ ಮಾಡಿದ್ದಾರೆ.
ಮಗನ ಸಾವಿನ ದುಃಖದಲ್ಲಿ ಇದ್ದ ವ್ಯಕ್ತಿಯನ್ನು ಈ ರೀತಿ ಅಮಾನವೀಯವಾಗಿ ಕೊಂದು ಹಾಕಿದ ಉಗ್ರರ ಪೈಶಾಚಿಕತೆ ಮಿತಿ ಮೀರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.